ಪಣಂಬೂರು: ವಿಹಾರಕ್ಕೆ ಬಂದ ಬೆಂಗಳೂರಿನ ಯುವಕ ಸಮುದ್ರಪಾಲು
Update: 2021-11-08 16:59 GMT
ಮಂಗಳೂರು, ನ.8: ಸಮುದ್ರ ವಿಹಾರಕ್ಕೆಂದು ಬಂದ ಯುವಕನೋರ್ವ ಸಮುದ್ರದ ಪಾಲಾದ ಘಟನೆ ಪಣಂಬೂರು ಬೀಚ್ನಲ್ಲಿ ಸೋಮವಾರ ನಡೆದಿದೆ.
ಸಮುದ್ರದ ಪಾಲಾದ ಯುವಕನನ್ನು ಬೆಂಗಳೂರು ಮೂಲದ ದಿನೇಶ್ (20)ಎಂದು ಗುರುತಿಸಲಾಗಿದೆ.
ದಿನೇಶ್ ತನ್ನ ಸ್ನೇಹಿತರಾದ ದೀಪಕ್, ಶ್ರೀನಿವಾಸ, ಪ್ರಶಾಂತ್ , ಸುನೀಲ್, ಸುದೀಪ್, ಪ್ರಜ್ವಲ್, ಸೀನಾ ಎಂಬವರೊಂದಿಗೆ ನ.7ರಂದು ಬೆಂಗಳೂರಿನಿಂದ ಕಾರು ಮಾಡಿಕೊಂಡು ಪಣಂಬೂರು ಬೀಚ್ಗೆ ಬಂದಿದ್ದರು. ಈ ಸಂದರ್ಭ ಸ್ನಾನಕ್ಕೆಂದು 8 ಮಂದಿ ಸಮುದ್ರಕ್ಕಿಳಿದಿದ್ದು, ಭಾರೀ ಅಲೆಯೊಂದು ದಿನೇಶ್ನನ್ನು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ತಂಡದ ಇತರರು ಆತನ ರಕ್ಷಣೆ ಯತ್ನಿಸಿದರೂ ಆತ ಸಮುದ್ರ ಪಾಲಾಗಿದ್ದು. ಈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.