ಅಪರಿಚಿತ ಯುವತಿ ಮಹಿಳಾ ಕೇಂದ್ರಕ್ಕೆ ದಾಖಲು

Update: 2021-11-09 14:10 GMT

ಉಡುಪಿ, ನ.9: ಕಳೆದ ತಿಂಗಳು ರಾತ್ರಿ ವೇಳೆ ಹೊತ್ತು ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಮಾನಸಿಕ ಅಸ್ವಸ್ಥೆಯನ್ನು ಇದೀಗ ಚೇತರಿಸಿಕೊಂಡಿದ್ದು, ಆಕೆಯ ವಾರೀಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯನ್ನು ನಿಟ್ಟೂರಿನ ಮಹಿಳಾ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮೂಲತಃ ಮಹಾರಾಷ್ಟ್ರದ ಮೀನಾಕ್ಷಿ ಎಂಬಾಕೆಯನ್ನು ವಿಶು ಶೆಟ್ಟಿ ಅಂಬಲ ಪಾಡಿ ಪೊಲೀಸರ ಸಹಾಯದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಯುವತಿ ಬಹಳಷ್ಟು ಚೇತರಿಸಿಕೊಂಡು ಸಹಜ ಸ್ಥಿತಿಗೆ ಬಂದಿದ್ದು ಆ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಯುವತಿಯ ಸಂಬಂಧಿಕರು ಅಥವಾ ಪರಿಚಯಸ್ಥರು ನಿಟ್ಟೂರು ಮಹಿಳಾ ಕೇಂದ್ರ ಸಂಪರ್ಕಿಸಲು ಕೋರಲಾಗಿದೆ. ಸಂಬಂಧಪಟ್ಟ ಇಲಾಖೆ ಯುವತಿಯ ಸಂಬಂಧಿಕರ ಪತ್ತೆ ಹಚ್ಚುವ ಪ್ರಯತ್ನ ಮಾಡಬೇಕಾಗಿ ಹಾಗೂ ಯುವತಿಗೆ ಔಷದೋಪಚಾರ ವೈದ್ಯರ ಸಲಹೆಯಂತೆ ನೀಡಬೇಕೆಂದು ವಿಶು ಶೆಟ್ಟಿ ವಿನಂತಿಸಿ ಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News