ಉಪ್ಪಿನಂಗಡಿ: ಟ್ರ್ಯಾಕ್ಟರ್ ಢಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

Update: 2021-11-10 08:08 GMT

ಉಪ್ಪಿನಂಗಡಿ, ನ.10: ಟ್ರ್ಯಾಕ್ಟರ್ ಢಿಕ್ಕಿ ಹೊಡೆದು ಬೈಕ್ ಸವಾರನೋರ್ವ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಹಳೆಗೇಟು ಕ್ರಾಸ್ ಬಳಿ ಬುಧವಾರ ನಡೆದಿದೆ.

ಕಣಿಯೂರು ಗ್ರಾಮದ ಬೇಂಗಾಯ ನಿವಾಸಿ ಭುವನೇಶ್ ಸಾಲ್ಯಾನ್ ಗಾಯಗೊಂಡ ಬೈಕ್ ಸವಾರ. ಭುವನೇಶ್ ತನ್ನ ಬೈಕಿನಲ್ಲಿ ಪೆರಿಯಡ್ಕ ಕಡೆಯಿಂದ ಉಪ್ಪಿನಂಗಡಿ ಕಡೆ ತೆರಳುತ್ತಿದ್ದ ಸಂದರ್ಭ ಹಳೆಗೇಟು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಏಕಾಏಕಿ ತಿರುವು ಪಡೆದುಕೊಂಡ ಟ್ರ್ಯಾಕ್ಟರ್ ಹಳೆಗೇಟು ಮರ್ಧಾಳ ರಸ್ತೆಗೆ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಬೈಕ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಭುವನೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News