ಕಂಕನಾಡಿ: ಕಾರಿನಲ್ಲಿ ಕಂಡುಬಂದ ಮೃತದೇಹದ ಗುರುತು ಪತ್ತೆ

Update: 2021-11-12 11:12 GMT

ಮಂಗಳೂರು, ನ.12: ನಗರದ ಕಂಕನಾಡಿ ಬಳಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅನಾಥ ಸ್ಥಿತಿಯಲ್ಲಿ ಕಂಡುಬಂದ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತರನ್ನು ಮಣ್ಣಗುಡ್ಡೆಯ ಪ್ರಶಾಂತ್ ಕೊಟ್ಟಾರಿ (44)ಎಂದು ಗುರುತಿಸಲಾಗಿದೆ. ಮಣ್ಣಗುಡ್ಡೆ ನಿವಾಸಿಯಾದ ಇವರು ಅಸ್ಪತ್ರೆಗೆ ಹೋಗಿ ಬರುವುದಾಗಿ ಪತ್ನಿಯ ಬಳಿ ಗುರುವಾರ ಬೆಳಗ್ಗೆ 10:30ಕ್ಕೆ ತಿಳಿಸಿ ಹೋಗಿದ್ದು, ಸಂಜೆಯಾದರೂ ಮರಳಿ ಬಾರದ ಕಾರಣ ಬರ್ಕೆ ಠಾಣೆಗೆ ದೂರು ನೀಡಲಾಗಿತ್ತು.

ಗುರುವಾರ ರಾತ್ರಿಯಿಂದಲೇ ಕಾರೊಂದು ಕಂಕನಾಡಿಯಲ್ಲಿ ಪಾರ್ಕ್ ಮಾಡಿದ ಸ್ಥಿತಿಯಲ್ಲಿ ನಿಂತಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನವೂ ಈ ಕಾರು ಅನಾಥ ಸ್ಥಿತಿಯಲ್ಲಿರುವುದನ್ನು ಕಂಡ ಸಾರ್ವಜನಿಕರು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News