ಮಂಗಳೂರಿನಲ್ಲಿ ಸಾಗರ್ ಕವಚ ಅಣಕು ರಕ್ಷಣಾ ಕಾರ್ಯಾಚರಣೆ

Update: 2021-11-12 16:28 GMT

ಮಂಗಳೂರು, ನ.12: ಭಯೋತ್ಪಾದನಾ ಕೃತ್ಯಗಳ ಸಂದರ್ಭದಲ್ಲಿ ಪೊಲೀಸ್ ಅಲರ್ಟ್‌ನ್ನು ಪರೀಕ್ಷಿಸುವುದಕ್ಕಾಗಿ ನಡೆಯುವ ‘ಸಾಗರ್ ಕವಚ’ ಅಣಕು ರಕ್ಷಣಾ ಕಾರ್ಯಾಚರಣೆ ಶುಕ್ರವಾರ ನಡೆಯಿತು.

ಪಣಂಬೂರಿನ 2 ಪ್ರಮುಖ ಸ್ಥಳಗಳು ಮತ್ತು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಬಾಂಬ್ ಇಡುವ ಪ್ರಯತ್ನಗಳನ್ನು ಅಣಕು ಕಾರ್ಯಾಚರಣೆ ಮೂಲಕ ನಡೆಸಲಾಗಿದ್ದು ಕಟ್ಟೆಚ್ಚರದಲ್ಲಿದ್ದ ಮಂಗಳೂರು ಪೊಲೀಸರು ಮೂರು ಕಡೆಯೂ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಕರಾವಳಿಯಲ್ಲಿ ಭದ್ರತೆಯನ್ನು ಪುನರ್‌ಪರಿಶೀಲಿಸುವ ಉದ್ದೇಶದಿಂದ ವರ್ಷದಲ್ಲಿ ಕನಿಷ್ಠ 2 ಬಾರಿ ‘ಸಾಗರ್ ಕವಚ’ ಹೆಸರಿನ ಅಣಕು ಕಾರ್ಯಾಚರಣೆ ನಡಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News