ನಂದಿಕೂರು : ಬ್ಯಾಂಕ್‍ನಲ್ಲಿ ಕಳ್ಳತನಕ್ಕೆ ಯತ್ನ; ದೂರು

Update: 2021-11-15 16:50 GMT

ಪಡುಬಿದ್ರಿ: ಇಲ್ಲಿನ ನಂದಿಕೂರಿನ ಯೂನಿಯನ್ ಬ್ಯಾಂಕ್‍ನಲ್ಲಿ ಕಿಟಿಕಿಯನ್ನು ಒಡೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

ಶಾಖೆಯ ವೆಂಟಿಲೇಟರ್ ಕಿಟಕಿಯನ್ನು ಒಡೆದು ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದು, ಬ್ಯಾಂಕ್ ಸಿಬ್ಬಂದಿ ಸೋಮವಾರ  ಬ್ಯಾಂಕ್ ಬಾಗಿಲು ತೆರದಾಗ ಘಟನೆ ಬೆಳಕಿಗೆ ಬಂದಿದೆ. ಏನೂ ಕಳವು ಆಗದೆ ಇರುವುದರಿಂದ ದೂರು ನೀಡುವುದಿಲ್ಲವೆಂದು ಲಿಖಿತವಾಗಿ ಬ್ಯಾಂಕ್ ಅಧಿಕಾರಿಗಳು ಹೇಳಿರುವುದರಿಂದ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಲಿಲ್ಲ.

ಬ್ಯಾಂಕ್‍ನ ಸಿಸಿಟಿವಿ ವ್ಯವಸ್ಥೆ, ಸೈರನ್ ವ್ಯವಸ್ಥೆಗಳು ಕೆಟ್ಟು ಹೋಗಿದ್ದು, ಅವನ್ನು ಕೂಡಲೇ ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕಾಗಿ ಹಿಂದೆಯೇ ನೋಟೀಸು ನೀಡಿದ್ದರೂ ಬ್ಯಾಂಕ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಡುಬಿದ್ರಿ ಪೊಲೀಸರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News