ಅಬಕಾರಿ ಅಕ್ರಮ ತಿಳಿಸಲು ಸಂಚಾರಿ ದಳ ನಿಯೋಜನೆ

Update: 2021-11-16 14:44 GMT

ಮಂಗಳೂರು, ನ.16: ವಿಧಾನ ಪರಿಷತ್ ಚುನಾವಣೆಯ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಗೊಂಡಿದ್ದು, ಈ ಅವಧಿಯಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸಂಚಾರಿ ದಳಗಳನ್ನು ನಿಯೋಜಿಸಲಾಗಿದೆ.

ಅಬಕಾರಿ ಅಕ್ರಮಗಳು ನಡೆದ ಬಗ್ಗೆ ಸಾರ್ವಜನಿಕರು ಸಂಚಾರಿ ತಂಡಗಳ ಮುಖ್ಯಸ್ಥರುಗಳಾದ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಆಯುಕ್ತರು, ಮೊ.ಸಂ: 9449597103, ಅಬಕಾರಿ ಉಪ ಅಧೀಕ್ಷಕಿ(ಪ್ರ) ಗೀತಾ ಪಿ., ಮೊ.ಸಂ: 8762118651, ಉಪ ವಿಭಾಗ ಮಟ್ಟದ ಮಂಗಳೂರು ಉಪವಿಭಾಗ-1ರ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಮೊ.ಸಂ:9449597109, ಮಂಗಳೂರು ಉಪವಿಭಾಗ-2ರ ಅಬಕಾರಿ ಉಪ ಅಧೀಕ್ಷಕ ಅಮರನಾಥ ಎಸ್.ಎಸ್. ಭಂಡಾರಿ ಮೊ.ಸಂ: 9449597781, ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಶೋಭಾ ಕೆ. ಮೊ.ಸಂ: 9449597107, ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ(ಪ್ರ) ಶಿವಪ್ರಸಾದ್ ಮೊ.ಸಂ:9449597111 ಅನ್ನು ಸಂಪರ್ಕಿಸುವಂೆ ಅಬಕಾರಿ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News