ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಪ್ರಾರಂಭ

Update: 2021-11-16 16:07 GMT

ಉಡುಪಿ, ನ.16:ಉಡುಪಿ ಶ್ರೀಕೃಷ್ಣ ಮಠದಲ್ಲಿ ಉತ್ಧಾನ ದ್ವಾದಶಿಯ ದಿನವಾದ ಇಂದು ಮೊದಲ ದಿನದ ಲಕ್ಷದೀಪೋತ್ಸವ ವೈಭವದಿಂದ ನಡೆಯಿತು. ದೇವರಮೂರ್ತಿಯನ್ನು ಗರ್ಭಗುಡಿಯಿಂದ ಹೊರತಂದು ಮೊದಲು ತೆಪ್ಪೋತ್ಸವ ಹಾಗೂ ನಂತರ ಲಕ್ಷದೀಪೋತ್ಸವ ನಡೆಯಿತು.

ಲಕ್ಷದೀಪೋತ್ಸವ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದೆ.ಈ ಸಂದರ್ಭದಲ್ಲಿ 30 ಸಾವಿರಕ್ಕೂ ಅಧಿಕ ಮಣ್ಣಿನ ಹಣತೆಯಲ್ಲಿ ದೀಪಗಳನ್ನು ಕೃಷ್ಣ ಮಠದೊಳಗೆ, ರಥಬೀದಿ ಹಾಗೂ ಮಧ್ವಸರೋವರದ ಸುತ್ತಲೂ ಬೆಳಗಿಸಲಾಯಿತು. ರಥಬೀದಿಯ ಸುತ್ತಲೂ 400ಕ್ಕೂ ಅಧಿಕ ಗೂಡುದೀಪಗಳನ್ನು ಸಹ ಬೆಳಗಿಸಲಾಗಿದೆ.

ಶ್ರೀಕೃಷ್ಣ ಮಠದ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಎಲ್ಲಾ ಮಠಾಧೀಶರು ಮೂರ್ತಿಗೆ ಪೂಜೆ ಮಾಡಿ ಕ್ಷೀರಾಬ್ದಿ ಅರ್ಘ್ಯ ನೀಡಿದರು. ಮೂರ್ತಿಗಳಿಗೆ ಮಧ್ವಸರೋವರದಲಿ ತೆಪ್ಪೋತ್ಸವ ನಡೆಸಿದ ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರನ ಉತ್ಸವ ಮೂರ್ತಿಗಳನ್ನು ಎರಡು ರಥದಲ್ಲಿರಿಸಿ ರಥೋತ್ಸವ ನಡೆಯಿತು.

ಲಕ್ಷದೀಪೋತ್ಸವ ಕಾರ್ಯಕ್ರಮಗಳಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ, ಪಲಿಮಾರು, ಪೇಜಾವರ, ಕಾಣಿಯೂರು ಹಾಗೂ ಪಲಿಮಾರು ಕಿರಿಯ ಶ್ರೀ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News