ಬಾವಿಗೆ ಬಿದ್ದು ಮೃತ್ಯು

Update: 2021-11-16 16:22 GMT

ಕಾರ್ಕಳ, ನ.16: ಬಾವಿಯ ದಂಡೆಯ ಹುಲ್ಲು ಕೀಳುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನ.15ರಂದು ಅಪರಾಹ್ನ ವೇಳೆ ಕೌಡೂರು ಗ್ರಾಮದ ದೊಡ್ಡಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಕೆ.ನರಸಿಂಗ(86) ಎಂದು ಗುರುತಿಸಲಾಗಿದೆ. ಇವರು ಮನೆ ಬಾವಿಯ ದಂಡೆಯ ಹುಲ್ಲನ್ನು ಬಗ್ಗಿ ಕೀಳುತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News