ಫೆ.19ರಂದು ಕದಿಕೆ ಹಳೆಯಂಗಡಿ ಉರೂಸ್

Update: 2021-11-19 18:25 GMT

ಮಂಗಳೂರು, ನ.19: ಹಳೆಯಂಗಡಿ ಕದಿಕೆಯ ಅಝ್ರತ್ ಸೈಯ್ಯದ್ ಮೌಲಾನಾ ವಲಿಯುಲ್ಲಾಹ್ (ಖ.ಸ) ಅವರ ಹೆಸರಿನಲ್ಲಿ 2 ವರ್ಷಕೊಮ್ಮೆ ನಡೆಯುವ ಹಳೆಯಂಗಡಿ ಕದಿಕೆ ಉರೂಸ್ ಸಮಾರಂಭವು ಫೆ. 19 ನಡೆಯಲಿದೆ.

ದರ್ಗಾ ವಠಾರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಫೆ. 16ರಿಂದ ದರ್ಗಾ ವಠಾರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಫೆ.19ರಂದು ಉರೂಸ್ ಕಾರ್ಯಕ್ರಮ ಜರುಗಲಿದೆ.

ಅಲ್ಲದೇ, ಇದೇ ಸಂದರ್ಭ ನೂತನ ಉರೂಸ್ ಸಮಿತಿಯ ರಚನೆಯೂ ನಡೆಯಿತು. ಉರೂಸ್ ಸಮಿತಿಯ ಗೌರವಾಧ್ಯಕ್ಷರಾಗಿ ಅಬ್ದುಲ್ ಕಾದರ್ ಕಜಕತೋಟ ಸಾಗ್, ಅಧ್ಯಕ್ಷರಾಗಿ ಜಮಾಲುದ್ದೀನ್ ಕದಿಕೆ, ಉಪಾಧ್ಯಕ್ಷರಾಗಿ ಎಂ.ಎಚ್. ಮುಸ್ತಫಾ ಸಾಗ್, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಉಪ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಕಜಕತೋಟ, ಅಕ್ಬರ್ ಅಲಿ ಸಾಗ್, ಖಜಾಂಚಿಯಾಗಿ ಬಶೀರ್ ಕಲ್ಲಾಪು ಹಾಗೂ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಸಾಹುಲ್ ಹಮೀದ್ ಕದಿಕೆ ಆಯ್ಕೆಯಾಗಿದ್ದಾರೆ ಎಂದು ಉರೂಸ್ ಕಮಿಟಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News