ನ.21ರಂದು ಪ್ರಸಾದ್ ನೇತ್ರಾಲಯದಲ್ಲಿ ನೂತನ ವಿಭಾಗಗಳ ಉದ್ಘಾಟನೆ
ಉಡುಪಿ, ನ.20: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೂತನ ಅರ್ಥೋಪ್ಟಿಕ್ ಕಣ್ಣಿನ ವಿಭಾಗ, ನಿಮ್ನ ದೃಷ್ಟಿ ನೆರವು ಕ್ಲಿನಿಕ್ ವಿಭಾಗ, ಮಕ್ಕಳ ನೇತ್ರ ಚಿಕಿತ್ಸಾ, ಐ ಟ್ರೇಸ್ ವಿಭಾಗಗಳ ಉದ್ಘಾಟನೆಯು ನ.21ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸ ಲಿರುವರು. ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಶುಭಾಶಂಸನೆ ಗೈಯಲಿರುವರು. ಅರ್ಥೋಪ್ಟಿಕ್ ಕಣ್ಣಿನ ವಿಭಾಗವನ್ನು ಗುಜರಾತ್ ಸರ್ವೋ ದಯ ಸೇವಾ ಟ್ರಸ್ಟ್ನ ಮುಖ್ಯ ಅಧ್ಯಕ್ಷ ಸೊಮ್ಭಾ ಮೋದಿ, ಲೋ ವಿಷನ್ ಕ್ಲಿನಿಕ್ನ್ನು ಸಚಿವ ಸುನೀಲ್ ಕುಮಾರ್, ಮಕ್ಕಳ ಕಣ್ಣಿನ ಕ್ಲಿನಿಕ್ನ್ನು ಮಾಹೆ ಪ್ರೊಚಾನ್ಸೆಲರ್ ಡಾ.ಎಸ್.ಎಸ್.ಬಲ್ಲಾಳ್, ಐ ಟ್ರೇಸ್ನ್ನು ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿರುವರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಮುಂಬೈ ಬಿಜೆಪಿ ಕಾರ್ಯದರ್ಶಿ ಮೋಹನ್ ಗೌಡ, ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು ಎಂದು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.