ಬಾಲಕಿಯ ಕೊಲೆ ಖಂಡಿಸಿ ಸಿಎಫ್‌ಐ ವತಿಯಿಂದ ಪ್ರತಿಭಟನೆ

Update: 2021-11-22 16:14 GMT

ಮಂಗಳೂರು, ನ.22 : ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿನ ಕಾರ್ಖಾನೆಯಲ್ಲಿ ರವಿವಾರ ನಡೆದ 8 ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಪರಾರಿ ಜಂಕ್ಷನ್ನಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಸಿಎಫ್‌ಐ ಮಂಗಳೂರು ನಗರ ಅಧ್ಯಕ್ಷ ಶರ್ಫುದ್ದೀನ್ ಬಜ್ಪೆ, ಉಳಾಯಿಬೆಟ್ಟು ಗ್ರಾಪಂ ಸದಸ್ಯ ಅಝರ್ ಉಳಾಯಿಬೆಟ್ಟು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಸರ್ಫ್ರಾಝ್, ನಗರ ಕಾರ್ಯದರ್ಶಿ ಹಫೀಝ್ ಮತ್ತು ಜಿಲ್ಲಾ ಮುಖಂಡರಾದ ಶಬೀರ್, ನಿಝಾಮ್, ಶಿಹಾಮ್ ಮತ್ತು ಝಾಹೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News