​ಉಪ್ಪಿನಂಗಡಿ: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Update: 2021-11-30 17:26 GMT

ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ  ಬಿದ್ದು ಸಿಕ್ಕಿದ ನಗದು ತುಂಬಿರುವ ಪರ್ಸನ್ನು ಪೊಲೀಸ್ ಠಾಣೆಯ ಮೂಲಕ  ವಾರೀಸುದಾರರಿಗೆ  ತಲುಪಿಸುವ ಮೂಲಕ ಅಟೋ ಚಾಲಕರೋರ್ವರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. 

ನರಸಿಂಹ ಶೆಟ್ಟಿ ಕಜೆಕ್ಕಾರ್ ಎಂಬ ಅಟೋ ಚಾಲಕ ಕಾರ್ಯ ನಿಮಿತ್ತ  ಸಂಚರಿಸುತ್ತಿದ್ದ ವೇಳೆ ಕಂಗಿನಾರುಬೆಟ್ಟು ಎಂಬಲ್ಲಿ ರಸ್ತೆ ಬದಿಯಲ್ಲಿ ಪರ್ಸು ಬಿದ್ದಿರುವುದನ್ನು  ಕಂಡು ಪರಿಶೀಲಿಸಿದಾಗ ಅದರಲ್ಲಿ ಹದಿಮೂರು ಸಾವಿರಕ್ಕೂ ಮಿಕ್ಕಿದ ನಗದು ಹಣವಿರುವುದು ಕಂಡು ಬಂತು. ಕೂಡಲೇ ಪರ್ಸನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.  ಪರ್ಸು  ಮಾಲಕ  ತೆಕ್ಕಾರು ನಿವಾಸಿ  ಶರೀಫ್ ಎಂಬವರು  ತನ್ನ ಪರ್ಸು ಕಳೆದುಕೊಂಡಿರುವುದನ್ನು ತಿಳಿಸಿದಾಗ ಠಾಣೆಯಲ್ಲೇ ಪರ್ಸ್ ಹಸ್ತಾಂತರಿಸಲಾಯಿತು.

ನಗದು ತುಂಬಿದ್ದ ಪರ್ಸನ್ನು ಅದರ  ನೈಜ ಮಾಲಕರಿಗೆ ಒದಗಿಸುವಲ್ಲಿ ಪ್ರಾಮಾಣಿಕತೆ ತೋರಿದ ನರಸಿಂಹ ಶೆಟ್ಟಿಯವರ ನಡೆ ಶ್ಲಾಘನೆಗೆ ಒಳಗಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News