ಬಜಾಲ್: ಮತ ಪ್ರಭಾಷ, ಹರೇಕಳ ಹಾಜಬ್ಬರಿಗೆ ಸನ್ಮಾನ

Update: 2021-12-01 10:21 GMT

ಮಂಗಳೂರು : ಶಂಸುಲ್ ಉಲಮಾ ಕ್ರಿಯಾ ಸಮಿತಿ ಎಸ್ಕೆಎಸ್ಸೆಸ್ಸೆಫ್ ಬಜಾಲ್ ನಂತೂರು ಫೈಸಲ್ ನಗರ ಶಾಖೆ ಇದರ ವತಿಯಿಂದ ಮತ ಪ್ರಭಾಷಣ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.

ಫೈಸಲ್ ನಗರ ಮಸೀದಿ ಖತೀಬರಾದ ದಾವೂದ್ ಹನೀಫಿ ಉದ್ಘಾಟನೆ ನೆರವೇರಿಸಿದರು. 

ಫೈಸಲ್ ನಗರ ಶಂಸುಲ್ ಉಲಮಾ ಕ್ರಿಯಾ ಸಮಿತಿ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಮೋಣಾಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಜಾಲ್ ನಂತೂರು ಮಸೀದಿ ಖತೀಬ್ ಪಿ.ಎಸ್ ಮುಹಮ್ಮದ್ ಕಾಮಿಲ್ ಸಖಾಫಿ ದುವಾ ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಬಜಾಲ್ ನಂತೂರ್ ಬಿಜೆಎಂ ಅಧ್ಯಕ್ಷ ರವೂಫ್ ಬಜಾಲ್, ಫಕ್ರುದ್ದೀನ್ ಬಜಾಲ್, ಬಿ.ಎ.ಬಿ ಅಹಮದ್ ಬಾವ ಬಜಾಲ್, ಯುಪಿ ಮುಹಮ್ಮದ್, ನಝೀರ್ ಬಜಾಲ್, ಅಝೀಝ್ ,ಅನ್ವರ್, ಹಮ್ಜಾ, ಅಬೂಬಕರ್ ಸಂಶೀರ್ ಬಜಾಲ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News