ಮಂಗಳೂರು; ತಲವಾರು ತೋರಿಸಿ ಜಾನುವಾರು ಕಳವು ಆರೋಪ : 4 ಮಂದಿ ಸೆರೆ

Update: 2021-12-04 08:50 GMT

ಮಂಗಳೂರು : ಹೊರವಲಯದ ಬಂಗ್ರಕುಳೂರು ಎಂಬಲ್ಲಿ ತಲವಾರು ತೋರಿಸಿ ಜಾನುವಾರು ಕಳವು ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉಳ್ಳಾಲದ ಸಲೀಂ(32), ತಂಝಿಲ್(25), ಇಕ್ಬಾಲ್ (23) ಮತ್ತು ಅಫ್ರಿದಿ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿರುವುದಾಗಿ ಕಾವೂರು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News