ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ : ಪದಾಧಿಕಾರಿಗಳ ಆಯ್ಕೆ

Update: 2021-12-09 16:37 GMT

ಪುತ್ತೂರು :  ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಎಸ್. ಅಬೂಬಕರ್ ಸ‌ಅದಿ ಮಜೂರು ಆಯ್ಕೆಯಾಗಿದ್ದಾರೆ.

ಪುತ್ತೂರು ಪುರಭವನದಲ್ಲಿ ನಡೆದ ಸಂಘದ ಮಹಾಸಭೆ ಯಲ್ಲಿ ಈ ಆಯ್ಕೆ ನಡೆಯಿತು. ಎಸ್.ವೈ.ಎಸ್ ನ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ ಉದ್ಘಾಟಿಸಿದರು, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಸಖಾಫಿ ಮಹಾಸಭೆಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಜಿ.ಎಂ.ಎಂ‌. ಕಾಮಿಲ್ ಸಖಾಫಿ ಪ್ರಸ್ತಾವನೆ ಗೈದರು. ರಾಜ್ಯ ಉಪಾಧ್ಯಕ್ಷ ಡಿ.ಕೆ.ಉಮರ್ ಸಖಾಫಿ, ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸದಸ್ಯ ಕೆ.ಇ.ರಝ್ವಿ ಸಾಲೆತ್ತೂರು, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ.ಎ.ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು.

ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಎಂ. ಸಾದಿಖ್ ಮಾಸ್ಟರ್ ಮಲೆಬೆಟ್ಟು, ಕೋಶಾಧಿಕಾರಿಯಾಗಿ ಜಿ.ಎಂ.ಕುಂಞಿ ಜೋಗಿಬೆಟ್ಟು ಇವರು ಆಯ್ಕೆಯಾದರು.

ದ‌ಅ್‌ವಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್‌ಬಾಹಿ ಈಶ್ವರಮಂಗಿಲ,  ಸಂಘಟನಾ ಕಾರ್ಯದರ್ಶಿ ಯಾಗಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಇಸಾಬಾ ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ, ಸಾಮಾಜಿಕ ಕಾರ್ಯದರ್ಶಿಯಾಗಿ ಖಾಸಿಂ ಪದ್ಮುಂಜ,  ಸಾಂಸ್ಕೃತಿಕ ಕಾರ್ಯದರ್ಶಿಯಾಗಿ  ಬಿ.ಟಿ.ಎಂ.ಅಬ್ಬಾಸ್ ಮದನಿ ಬಂಡಾಡಿ ಹಾಗೂ ಮಾಧ್ಯಮ ಕಾರ್ಯದರ್ಶಿಯಾಗಿ ಯೂಸುಫ್ ಸ‌ಈದ್ ನೇರಳಕಟ್ಟೆ ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಂ.ತಂಙಳ್ ಉಜಿರೆ, ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪೂಂಜಾಲ ಕಟ್ಟೆ, ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಅಬ್ದುಲ್ ಕರೀಂ ಚೆನ್ನಾರ್, ಅಶ್ರಫ್ ಸಖಾಫಿ ಸವಣೂರು, ಅಶ್ರಫ್ ಸಖಾಫಿ ಮೂಡಡ್ಕ, ಹೈದರ್ ಫೈಝಿ ಕುಪ್ಪೆಟ್ಟಿ, ಅಬ್ದುಲ್ ಹಮೀದ್ ಸಖಾಫಿ ಪಾಡಿ, ಹನೀಫ್ ಹಾಜಿ ಇಂದ್ರಾಜೆ, ಎ.ಬಿ‌.ಅಶ್ರಫ್ ಸ‌ಅದಿ ಸುಳ್ಯ, ಇಬ್ರಾಹಿಂ ಕಕ್ಕಿಂಜೆ, ಅಬ್ದುಲ್ ಖಾದರ್ ಸಖಾಫಿ ಕಡಂಬು, ಕೆ.ಎಚ್.‌ಬದ್ರುದ್ದೀನ್ ಲತೀಫಿ ವೇಣೂರು, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಪಿ.ವೈ.ಮುಹಮ್ಮದ್ ಮದನಿ‌ ಇರ್ದೆ, ಕೆ.ವೈ.ಹಂಝ ಮದನಿ ಮಡಂತ್ಯಾರ್, ಬಶೀರ್ ಚೆನ್ನಾರ್ ಕಡಬ, ಪಿ.ಯು.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನಾವೂರು, ಅಬೂಬಕರ್ ಮುಸ್ಲಿಯಾರ್ ನೀರಕಟ್ಟೆ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಹೈದರ್ ಹಾಜಿ ಮುರುಗೋಳಿ, ಖಾಸಿಂ‌ ಮುಸ್ಲಿಯಾರ್ ಉಜಿರೆ, ಅಬ್ದುಲ್ ಹಮೀದ್ ಸುಣ್ಣಮೂಲೆ, ಸ್ವಾಲಿಹ್ ಮುರ, ಫಾರೂಖ್ ಸಖಾಫಿ ವೇಣೂರು, ಮುಸ್ತಫಾ ಕೋಡಪದವು, ಶಂಸುದ್ದೀನ್ ಝಂಝಂ ಬೆಳ್ಳಾರೆ, ಸುಲೈಮಾನ್ ಸಖಾಪಿ ಅಂಗ್ರಿ, ಹಮೀದ್ ಕೊಯಿಲ, ಉಸ್ಮಾನ್ ಜೌಹರಿ ನೆಲ್ಯಾಡಿ, ಕೆ.ಬಿ.ಖಾಸಿಂ ಹಾಜಿ ಮಿತ್ತೂರು, ಅಬ್ದುಲ್‌ ರಶೀದ್ ಸಖಾಫಿ ಗಡಿಯಾರ, ಯೂಸುಫ್ ಸವಣೂರು, ಶಾಫಿ ಸಖಾಫಿ ಕೊಕ್ಕಡ, ಮುಹಮ್ಮದ್ ಹಾಜಿ ಮೂರುಗೋಳಿ, ಎಂ.ಎಚ್.ಅಬ್ದುಲ್‌ ಖಾದರ್ ಹಾಜಿ ಉಪ್ಪಿನಂಗಡಿ, ಕೆ.ಇ. ಅಬೂಬಕರ್ ನೆಲ್ಯಾಡಿ ಇವರನ್ನು ನೇಮಿಸಲಾಯಿತು.

ಕಾಸಿಂ ಪದ್ಮುಂಜ ಸ್ವಾಗತಿಸಿ ಸಾದಿಖ್ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News