ಮಂಗಳೂರು: ಮಗುವಿನೊಂದಿಗೆ ತಂದೆ ನಾಪತ್ತೆ; ಪ್ರಕರಣ ದಾಖಲು

Update: 2021-12-13 17:08 GMT

ಮಂಗಳೂರು, ಡಿ.13: ವ್ಯಕ್ತಿಯೊಬ್ಬ ತನ್ನ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.

ನಗರದ ಕುಲಶೇಖರ ಬಳಿಯ ಬಾಡಿಗೆ ಮನೆಯೊಂದರಲ್ಲಿ ಗೊಲ್ಲರಹಳ್ಳಿಯ ಕೆಂಚಗಿರಿ ಯಾನೆ ಕೆಂಚಪ್ಪ ಎಂಬಾತ ತನ್ನ ಪತ್ನಿ ಅಭಿಲಾಷ ಮತ್ತು ಎರಡು ವರ್ಷ ನಾಲ್ಕು ತಿಂಗಳ ಮಗ ಪುನೀತ್ ಎಂಬವರ ಜೊತೆ ಸಂಸಾರ ಸಾಗಿಸುತ್ತಿದ್ದ. ಡಿ.12ರಂದು ಬೆಳಗ್ಗೆ 9 ಗಂಟೆಗೆ ಕೆಂಚಪ್ಪನು ತನ್ನ ಎಳೆಯ ಮಗುವನ್ನು ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಅಭಿಲಾಷಳ ತಂದೆ ಸಿದ್ಧಪ್ಪ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News