ಡಿ.18ರಂದು ಕಾಶೀಮಠಾಧೀಶರು ಶ್ರೀಕೃಷ್ಣ ಮಠಕ್ಕೆ

Update: 2021-12-15 16:19 GMT

ಉಡುಪಿ, ಡಿ.15: ಶ್ರೀಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಸಂಯಮೀಂದ್ರ ತೀರ್ಥರು ಡಿ.18ರಂದು ಶನಿವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

ಮೊದಲ ಬಾರಿಗೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುತ್ತಿರುವ ಕಾಶಿ ಮಠಾಧೀಶರನ್ನು ಅಪರಾಹ್ನ 3:30ಕ್ಕೆ ಸಂಸ್ಕೃತ ಕಾಲೇಜು ವೃತ್ತದ ಬಳಿ ಸ್ವಾಗತಿಸಿ ಕರೆದೊಯ್ಯಲಾಗುವುದು. ಸಂಜೆ 4ಗಂಟೆಗೆ ಅವರು ರಾಜಾಂಗಣದಲ್ಲಿ ನಡೆಯುವ ಅದಮಾರು ಪರ್ಯಾಯದ ಮಂಗಲೋತ್ಸವ ‘ವಿಶ್ವಾರ್ಪಣಮ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News