ಡಿ. 24ರಂದು ಸರ್ವಧರ್ಮ ಸೌಹಾರ್ದ ಕ್ರಿಸ್ಮಸ್ ಕೂಟ

Update: 2021-12-22 09:41 GMT

ಮಂಗಳೂರು, ಡಿ.22: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಡಿ.24ರಂದು ಬೆಳಗ್ಗೆ 11.30ಕ್ಕೆ ಬಲ್ಮಠ ಶಾಂತಿ ನಿಲಯ ಬಿಷಪ್ ಜತ್ತನ್ನ ಮೆಮೋರಿಯಲ್ ಸಭಾಂಗಣದಲ್ಲಿ ಸರ್ವಧರ್ಮ ಸೌಹಾರ್ದ ಕ್ರಿಸ್ಮಸ್ ಕೂಟ ಆಯೋಜಿಸಲಾಗಿದೆ.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಲಿದ್ದಾರೆ. ಮಂಗಳೂರು ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಮುದ್ದುಮೂಡುಬೆಳ್ಳೆ, ಕೆಟಿಸಿ ಪ್ರಾಂಶುಪಾಲ ಎಚ್.ಎಂ.ವಾಟ್ಸನ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ನಟ ಅರವಿಂದ ಬೋಳಾರ್ ಉಪಸ್ಥಿತರಿರಲಿದ್ದಾರೆ.

ಜಯವಂತಿ ಟೀಚರ್ ನೇತೃತ್ವದಲ್ಲಿ ಕ್ರಿಸ್‌ಮಸ್ ಕ್ಯಾರಲ್ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದು ಐವನ್ ಡಿಸೋಜ ಅಭಿಮಾನಿ ಬಳಗದ ಪ್ರಮುಖರಾದ ನಾಗೇಂದ್ರ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮನುರಾಜ್, ಜೇಮ್ಸ್ ಪ್ರವೀಣ್, ಚಿತ್ತರಂಜನ್ ಶೆಟ್ಟಿ, ಅಲಿಸ್ಟರ್ ಡಿಕುನ್ಹ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News