ಮಂಗಳೂರು: ಮತ್ತೊಂದು ಒಮೈಕ್ರಾನ್ ಸೋಂಕು ಪತ್ತೆ

Update: 2021-12-23 14:06 GMT

ಮಂಗಳೂರು, ಡಿ. 23: ಘಾನಾದಿಂದ ದುಬೈಗೆ ಆಗಮಿಸಿ ಅಲ್ಲಿಂದ ಮಂಗಳೂರಿಗೆ ಆಗಮಿಸಿದ್ದ ಕೊರೋನ ಸೋಂಕಿತ ವ್ಯಕ್ತಿಯಲ್ಲಿ ಇದೀಗ ಒಮೈಕ್ರಾನ್ ಪ್ರಬೇಧ ಪತ್ತೆಯಾಗಿದೆ.

ಕರ್ನಾಟಕದಲ್ಲಿ ಇಂದು 12 ಹೊಸ ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಟ್ವೀಟ್ ಮಾಡಿದ್ದು, ಅವರಲ್ಲಿ ಘಾನಾದಿಂದ ಬಂದಿರುವ 27ರ ಹರೆಯದ ವ್ಯಕ್ತಿಯೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಡಿ. 16ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಘಾನಾದಿಂದ ದುಬೈ ಆಗಿ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ತಪಾಸಣೆ ಗೊಳಪಡಿಸಲಾಗಿತ್ತು. ಆ ಸಂದರ್ಭ ಕೊರೋನ ಸೋಂಕು ಪತ್ತೆಯಾಗಿದ್ದು, ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಡಿ. 17ರಂದು ಬೆಂಗಳೂರಿಗೆ ಕಳುಹಿಸಲಾಗಿತ್ತು ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News