ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2021-12-23 16:19 GMT

ಕುಂದಾಪುರ, ಡಿ.23: ಹೆಮ್ಮಾಡಿ ಗ್ರಾಮದ ಸಂತೋಷನಗರ ನಿವಾಸಿ ಪುಂಜು ಪೂಜಾರಿ ಎಂಬವರ ಮಗ ದಿನೇಶ ಪೂಜಾರಿ(35) ಎಂಬವರು ಡಿ.21ರಂದು ಸಂಜೆ ವೇಳೆ ಫೋನಿನಲ್ಲಿ ಮಾತನಾಡುತ್ತ ಮನೆಯಿಂದ ಹೊರಟು ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮಾಸೆಬೈಲು: ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಪ್ರಭಾಕರ ಶೆಟ್ಟಿ (52) ಎಂಬವರು ಡಿ.11ರಂದು ಬೆಳಗ್ಗೆ ಅಮಾಸೆಬೈಲು ಪೇಟೆಗೆ ಹೋದವರು ಈತನಕ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News