ಕೆಸಿಎಫ್ ಬಹರೈನ್ ವತಿಯಿಂದ ಸ್ವಚ್ಛತಾ ಅಭಿಯಾನ-2021

Update: 2021-12-26 01:47 GMT

ಬಹರೈನ್ : ಕಳೆದ 8 ವರ್ಷಗಳಿಂದ ಅನಿವಾಸಿ ಕನ್ನಡಿಗರ ಪಾಲಿಗೆ ಆಶಾ ಕಿರಣವಾಗಿರುವ ಕೆ.ಸಿ ಎಫ್ ಬಹರೈನ್ ಸಂಘಟನೆಯು ಹಲವಾರು ರೀತಿಯ ಧಾರ್ಮಿಕ, ಸಾಂತ್ವನ ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಪ್ರಶಂಸೆಗೆ ಪಾತ್ರವಾಗಿದೆ.

ಬಹರೈನ್ ನ್ಯಾಷನಲ್ ಡೇ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಕೆ.ಸಿ.ಎಫ್ ಅಯೋಜಿಸಲಾಗಿದ್ದು, ಶುಕ್ರವಾರ ಬಹರೈನ್ ಬುಸೈತೀನ್ ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮುಹರ್ರಕ್ ಡೆಪ್ಯುಟಿ ಗವರ್ನರ್ ಬ್ರಿಗೇಡಿಯರ್ ಅಬ್ದುಲ್ಲ ಖಲೀಫರವರು ಚಾಲನೆ ನೀಡಿದರು.  ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರುಗಳು ಹಾಜರಾಗಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಹರ್ರಕ್ ಡೆಪ್ಯುಟಿ ಗವರ್ನರ್ ಬ್ರಿಗೇಡಿಯರ್ ಅಬ್ದುಲ್ಲ ಖಲೀಫರವರು ಕೆಸಿಎಫ್ ನ ಕಾರ್ಯಚರಣೆಯನ್ನು ಶ್ಲಾಘಿಸಿ ಪ್ರಶಸ್ತಿ ಫಲಕವನ್ನು ನೀಡಿ , ಸ್ವಚ್ಛತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು . ಮುಹರ್ರಕ್ ಮುನ್ಸಿಪಾಲಿಟಿ ಡೈರೆಕ್ಟರ್ ಶೈಖ್ ವಹೀದ್ ಅಲ್ ಮನ್ನಾಯಿ ಕೂಡ ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಉದ್ಯಮಿ ಮಸ್ತಾನ್ ಶೈಖ್  ಕಾರ್ಯಕ್ರಮಕ್ಕೆ ಶುಭಹಾರೈಸಿದರು
ಕೆ.ಸಿ.ಎಫ್ ಬಹರೈನ್ ಐ.ಎನ್. ಸಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಅಲಿ ಮುಸ್ಲಿಯಾರ್, ಕೆಸಿಎಫ್ ಹಿರಿಯ ನಾಯಕರಾದ ಫಕ್ರುದ್ದೀನ್ ಪೈಂಬಚ್ಚಾಲ್ ಹಾಗೂ ಬಹರೈನಿನ ಪ್ರಮುಖ ಪರ್ತಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಉಸ್ತುವಾರಿಯನ್ನು ಕೆಸಿಎಫ್ ಬಹರೈನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಹನೀಫ್ ಜಿಕೆ ರವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News