ವಿಟ್ಲ : ನೇತಾಜಿ ಗೆಳೆಯರ ಬಳಗ ವತಿಯಿಂದ ಕ್ರೀಡೋತ್ಸವ

Update: 2022-01-05 09:17 GMT

ವಿಟ್ಲ : ನೇರಳಕಟ್ಟೆ ಸಮೀಪದ  ನೇತಾಜಿ ನಗರದ ನೇತಾಜಿ ಗೆಳೆಯರ ಬಳಗ ವತಿಯಿಂದ ನಡೆದ ಪುರುಷರ 60 ಕೆ.ಜಿ.ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬ್ರದರ್ಸ್ ಕಡೇಶ್ವಾಲ್ಯ ತಂಡವು ಪ್ರಥಮ, ನೇತಾಜಿ ಗೆಳೆಯರ ಬಳಗ ದ್ವಿತೀಯ, ಯುವ ಶಕ್ತಿ ಬಜಿರೆ ತೃತೀಯ ಹಾಗೂ ಶಿವಂ ಫ್ರೆಂಡ್ಸ್  ಕಡೇಶ್ವಾಲ್ಯ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ನವೀನ, ವಿಜೇಶ್ ಮತ್ತು ನಿತೇಶ್ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಯುವ ಶಕ್ತಿ ಫ್ರೆಂಡ್ಸ್ ಗಣೇಶ ನಗರ ತಂಡವು ಪ್ರಥಮ, ಕೆ.ಎಂ.ಎಸ್.ಕಬಕ ತಂಡ ದ್ವಿತೀಯ, ನೇತಾಜಿ ಗೆಳೆಯರ ಬಳಗ ತೃತೀಯ ಹಾಗೂ ಯುವ ಶಕ್ತಿ ಫ್ರೆಂಡ್ಸ್ ಗಣೇಶ ನಗರ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ರಾಖಿ ಕೈರಂಗಳ, ಸಿರಾಜ್ ಮತ್ತು ಜಯವರ್ಧನ್ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕ್ರೀಡೋತ್ಸವದ  ಅಧ್ಯಕ್ಷತೆ ಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ವಹಿಸಿದ್ದರು. ನೇರಳಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಉದ್ಘಾಟಿಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಧನುಂಜಯ ಗೌಡ, ಜಯಂತಿ ಹರೀಶ್ ಪೂಜಾರಿ ವಿಜೇತರಿಗೆ ಬಹುಮಾನ ವಿತರಿಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ರೈ ಸ್ವಾಗತಿಸಿ, ವಂದಿಸಿದರು. ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News