ಜ.11ರಂದು ಬಸ್ತಿ ವಾಮನ ಶೆಣೈ ಶ್ರದ್ಧಾಂಜಲಿ ಸಭೆ

Update: 2022-01-08 16:15 GMT

ಮಂಗಳೂರು, ಜ.8: ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ಇತ್ತೀಚಿಗೆ ನಿಧನರಾಗಿದ್ದು, ಮೃತರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯು ಜ.11ರಂದು ಸಂಜೆ 4 ಗಂಟೆಗೆ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿದೆ.

ಈ ಮೊದಲು ಜನವರಿ 8ಕ್ಕೆ ಜರಗುವುದೆಂದು ಪ್ರಕಟಿಸಲಾಗಿದ್ದರೂ ಕೋವಿಡ್ ನಿಯಮಾವಳಿ ಹಾಗೂ ವಾರಾಂತ್ಯ ಕರ್ಫ್ಯೂ ಪ್ರಯುಕ್ತ ಮುಂದೂಡಲಾಗಿದೆ. ಬಸ್ತಿ ವಾಮನ ಶೆಣೈಯವರ ಅಭಿಮಾನಿಗಳು ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಈ ಶ್ರದ್ಧಾಂಜಲಿ ಸಭೆಗೆ ಹಾಜರಾಗಿ ಅಶ್ರುತರ್ಪಣವನ್ನು ಸಲ್ಲಿಸಬೇಕೆಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News