ಜಪ್ಪಿನಮೊಗರು-ಬಜಾಲ್ ರಸ್ತೆ ಅಭಿವೃದ್ಧಿಗೆ ಚಾಲನೆ
ಮಂಗಳೂರು, ಜ.8: ನಗರದ ಜಪ್ಪಿನಮೊಗರು-ಬಜಾಲ್ ನಡುವಿನ ಪ್ರಮುಖ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿದರು.
ಬಳಿಕ ಈ ವೇಳೆ ಅವರು ಜಪ್ಪಿನಮೊಗರುವಿನಿಂದ ಬಜಾಲ್ ಸಂಪರ್ಕಿಸುವ ಪ್ರಮುಖ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರಕಾರದ ಸಿಆರ್ಎಫ್ ಫಂಡ್ ಮೂಲಕ 2 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸದಸ್ಯರಾದ ಶೋಭಾ ಪೂಜಾರಿ, ವೀಣಾ ಮಂಗಲ, ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ಚಂದ್ರ ಶೆಟ್ಟಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ರೈ ಎಕ್ಕೂರು, ಭರತ್ರಾಜ್ ಶೆಟ್ಟಿ, ಸಂದೇಶ್ ಶೆಟ್ಟಿ, ವಿಶ್ವನಾಥ ಸಾಲ್ಯಾನ್, ಲೋಕೇಶ್ ಕುಡ್ತಡ್ಕ, ಮೋಹನ್ದಾಸ್ ಶೆಟ್ಟಿ ಕುಡ್ತಡ್ಕ, ರಾಮ್ಪ್ರಸಾದ್ ಶೆಟ್ಟಿ, ಸುಜಾತಾ ಕೊಟ್ಟಾರಿ, ಚಂದ್ರಶೇಖರ್ ಜಲ್ಲಿಗುಡ್ಡೆ, ರೋಹಿತ್ ಶೆಟ್ಟಿ, ಯೋಗಿಶ್, ಪುಷ್ಪರಾಜ್, ಯಶೋಧಾ ಗಟ್ಟಿ, ಮಾನಸ ರೈ, ರೂಪಾ ಭಂಡಾರಿ, ಹರೀಶ್ ಕುಡ್ತಡ್ಕ, ರೇಖಾ ಶೆಟ್ಟಿ, ವಿದ್ಯಾ, ದೀಪಕ್, ಪ್ರಸಾದ್, ಸುಪ್ರೀತ್, ಹರೀಶ್ ಕಡೆಕಾರು, ರಾಘವೇಂದ್ರ, ನವೀನ್, ನಾಗೇಶ್, ಕೀರ್ತಿರಾಜ್, ಪ್ರಶಾಂತ್ ಉಪಸ್ಥಿತರಿದ್ದರು.