ಕಾರ್ಕಳ ಪುರಸಭೆ ಕಲ್ಯಾಣಾಭಿವೃದ್ಧಿ ವತಿಯಿಂದ ಸಹಾಯ ಧನದ ಚೆಕ್‌ ವಿತರಣೆ

Update: 2022-02-07 13:51 GMT

ಕಾರ್ಕಳ : ಪುರಸಭೆ ಕಲ್ಯಾಣಾಭಿವೃದ್ದಿ ವಿಭಾಗದ ವತಿಯಿಂದ ಅನುಸೂಚಿತ ಜಾತಿ, ಪಂಗಡ ಹಾಗೂ ದಿವ್ಯಾಂಗದ ವಿದ್ಯಾರ್ಥಿಗಳಿಗೆ ಪುರಸಭಾ ಸಭಾಂಗಣದಲ್ಲಿ ಸಚಿವ ವಿ. ಸುನಿಲ್‌ ಕುಮಾರ್‌ ಸೋಮವಾರ ಸಹಾಯ ಧನದ ಚೆಕ್‌ ವಿತರಿಸಿದರು. 

ಬಳಿಕ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 70 ಮಂದಿಗೆ ಚೆಕ್‌ ವಿತರಿಸುವ ಮೂಲಕ ಅವರ ಬದುಕಿಗೆ ಕಿಂಚಿತ್ತು ಸಹಕಾರ ಮಾಡುವ ಕಾರ್ಯವನ್ನು ಪುರಸಭೆ ಮಾಡಿದೆ. ಈ ಮೊತ್ತದಿಂದಲೇ ಜೀವನ ನಡೆಯುತ್ತದೆ ಎಂದಲ್ಲ. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬುವ ಕಾರ್ಯವಾಗುತ್ತಿದೆ ಎಂದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News