ಕಾಸರಗೋಡು; ಪೊಲೀಸರಿಗೆ ಹಲ್ಲೆ ಮಾಡಿದ ಯುವಕ : ಎಸೈ ಸಹಿತ ನಾಲ್ವರಿಗೆ ಗಾಯ

Update: 2022-02-07 18:17 GMT
ಗಾಯಾಳು 

ಕಾಸರಗೋಡು :  ಪೊಲೀಸರ ಮೇಲೆ  ಯುವಕನೋರ್ವ ಹಲ್ಲೆ  ನಡೆಸಿದ ಘಟನೆ ನಗರ ಹೊರವಲಯದ ಅಣ೦ಗೂರು ಎಂಬಲ್ಲಿ  ಇಂದು ರಾತ್ರಿ ನಡೆದಿದ್ದು, ಎಸೈ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಅಣ೦ಗೂರಿನ ಬಾರ್ ವೊಂದರಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಕಾಸರಗೋಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು,  ಬಂಧಿತನನ್ನು ಆಲೂರು ನಿವಾಸಿ ಮುನೀರ್ ಎಂದು ತಿಳಿದುಬಂದಿದೆ. ಈತ ಹಲವು ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್  ವಿಷ್ಣು ಪ್ರಸಾದ್, ಚಾಲಕ ಸಜಿತ್, ಸನೀಶ್ ಹಾಗೂ ಬಾಬು ರಾಜ್ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ತಲಪಿದ ಪೊಲೀಸರ ಮೇಲೆ ಕಾರಿನ ವೈಫರ್ ನಿಂದ ಹಲ್ಲೆ ನಡೆಸಿದ್ದು, ಪೊಲೀಸರು ಹರಸಾಹಸ ಪಟ್ಟು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಮುನೀರ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮೊದಲಾದ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News