ಚರಂಡಿಗೆ ಬಿದ್ದ ಕಾರು: ಓರ್ವ ಮೃತ್ಯು
Update: 2022-02-22 18:33 GMT
ಶಂಕರನಾರಾಯಣ, ಫೆ.22: ಅಡ್ಡ ಬಂದ ದನವನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿ ಬಿದ್ದ ಪರಿಣಾಮ ಮೃತಪಟ್ಟ ಘಟನೆ ಫೆ.21ರಂದು ಮಧ್ಯಾಹ್ನ ವೇಳೆ ಹಾಲಾಡಿ -ಸೊಮೇಶ್ವರ ರಸ್ತೆಯ ಅಲ್ಬಾಡಿ ಗ್ರಾಮದ ಕೊಂಜಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಎಂ.ತೇಜಪ್ಪ ಶೆಟ್ಟಿ ಎಂದು ಗುರುತಿಸಲಾಗಿದೆ. ಸೋಮೇಶ್ವರ ಕಡೆಯಿಂದ ಬೆಳ್ವೆ ಕಡೆಗೆ ಹೋಗುತ್ತಿದ್ದ ಕಾರಿಗೆ ದನವೊಂದು ಒಮ್ಮೆಲೆ ಅಡ್ಡ ಬಂತೆನ್ನಲಾಗಿದೆ. ಅದನ್ನು ತಪ್ಪಿಸಲು ಚಾಲಕ ಕಾರನ್ನು ಒಮ್ಮೆಲೆ ತಿರುಗಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿಚರಂಡಿಗೆ ಮಗುಚಿ ಬಿತ್ತು. ಇದರಿಂದ ಕಾರಿನ ಒಳಗೆ ಇದ್ದ ತೇಜಪ್ಪ ಶೆಟ್ಟಿ ಗಂಭೀರವಾಗಿ ಗಾಯಗೊಂಡ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.