ಎ.7ರಂದು ಸೇವಾನಿಕೇತನ ಕಾರ್ಯಾಲಯ ಉದ್ಘಾಟನೆ
ಉಡುಪಿ, ಎ.೬: ಸೇವಾ ಭಾರತಿ ಇದರ ಉಡುಪಿ ಜಿಲ್ಲಾ ಕಾರ್ಯಾಲಯ ಸೇವಾನಿಕೇತನ ಇದರ ಉದ್ಘಾಟನೆ ಎ.೭ರಂದು ಹೆರ್ಗಾದ ಶ್ರೀದುರ್ಗಾಪರ ಮೇಶ್ವರಿ ದೇವಸ್ಥಾನದ ಬಳಿ ಬೆಳಗ್ಗೆ ೧೦.೩೦ಕ್ಕೆ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ರೂಪಾಲಕ್ಷ್ಮೀ, ಕಾರ್ಯಾಲಯವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿರುವರು. ಸೇವಾಭಾರತಿ ಬೆಳ್ತಂಗಡಿ ಅಧ್ಯಕ್ಷ ಕೆ. ವಿನಾಯಕ ರಾವ್ ಅಧ್ಯಕ್ಷತೆ ವಹಿಸಲಿರುವರು ಎಂದು ತಿಳಿಸಿದರು.
ಸೇವಾಧಾಮದ ನಿರ್ದೇಶಕ ರಾಯನ್ ಫೆರ್ನಾಂಡಿಸ್ ಮಾತನಾಡಿ, ಸಂಸ್ಥೆಯು ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ೫ ಜಿಲ್ಲೆಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯವನ್ನು ವಿಸ್ತರಿಸಿದೆ. ಪ್ರಸ್ತುತ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸೇವಾಧಾಮ ಹೆಸರಿನಲ್ಲಿ ಪುನಃಶ್ಚೇತನ ಕೇಂದ್ರ ವನ್ನು ಸೌತಡ್ಕದಲ್ಲಿ ಸ್ಥಾಪಿಸಲಾಗಿದೆ. ಈವರೆಗೆ ೮೦ ಮಂದಿ ಇಂತಹ ದಿವ್ಯಾಂಗ ರನ್ನು ಗುರುತಿಸಲಾಗಿದ್ದು, ೬೦ಕ್ಕೂ ಅಧಿಕ ದಿವ್ಯಾಂಗರನ್ನು ಪುನಃಶ್ಚೇತನಗೊಳಿಸ ಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ, ನಗರಸಭೆ ಸದಸ್ಯ ವಿಜಯ ಕೊಡವೂರು, ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.