ಎ.10ರಂದು ಹಿರಿಯಡ್ಕದಲ್ಲಿ ಸುಸಜ್ಜಿತ ಬಾಲಭವನ ಉದ್ಘಾಟನೆ

Update: 2022-04-08 14:03 GMT

ಉಡುಪಿ : ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ದಾನಿಗಳ ನೆರವು ಸೇರಿದಂತೆ ಒಟ್ಟು 12.5 ಲಕ್ಷ ರೂ. ಅನುದಾನದಲ್ಲಿ ಹಿರಿಯಡ್ಕ ಗಾಂಧಿ ಮೈದಾನದಲ್ಲಿ ನಿರ್ಮಿಸ ಲಾದ ಸುಸಜ್ಜಿತ ಬಾಲಭವನದ ಉದ್ಘಾಟನೆ ಹಾಗೂ ವಾಲಿಬಾಲ್ ಪಂದ್ಯಾಟವು ಎ.10ರಂದು ನಡೆಯಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯಡ್ಕ ನವ್ಯೋದಯ ಫ್ರೆಂಡ್ಸ್ ಕ್ಲಬ್‌ನ ಕಾರ್ಯದರ್ಶಿ ಶರತ್ ಜೆನ್ನಿ, ಸಂಜೆ ೫ಗಂಟೆಗೆ ವಾಲಿ ಬಾಲ್ ಪಂದ್ಯಕೂಟವನ್ನು ದಿನೇಶ್ ಮೆಂಡನ್ ಉದ್ಘಾಟಿಸಲಿರುವರು. ರಾತ್ರಿ ೭ಗಂಟೆಗೆ ಬಾಲಭವನವನ್ನು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಉದ್ಘಾಟಿ ಸಲಿರುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿ ಷತ್ ಸದಸ್ಯ ಮಂಜುನಾಥ್ ಭಂಡಾರಿ, ವಿನಯ ಕುಮಾರ್ ಸೊರಕೆ ಭಾಗ ವಹಿಸವರುವರು ಎಂದರು.

ಈ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನಿಸಲಾಗುವುದು. ವಾಲಿಬಾಲ್ ಪಂದ್ಯಾಟದ ವಿಜೇತ ತಂಡಗಳಿಗೆ ನಗದು ಬಹುಮಾನ ಪ್ರಥಮ ೧೫,೦೦೧, ದ್ವಿತೀಯ ೧೦೦೦೧, ತೃತೀಯ ೬೦೦೦ರೂ., ಚತುರ್ಥ ೩೫೦೧ರೂ. ಮತ್ತು ಶಾಶ್ವತ ಫಲಕವನ್ನು ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್, ಕ್ಲಬ್‌ನ ಅಧ್ಯಕ್ಷ ನರಸಿಂಹ ಕಾಮತ್, ಪ್ರಸನ್ನ ಶೆಟ್ಟಿ, ರಾಘವೇಂದ್ರ ಜಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News