ಮಲೆನಾಡು ಗಲ್ಫ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2022-04-08 18:33 GMT

ಮಂಗಳೂರು : ಮಲೆನಾಡು ಗಲ್ಫ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಲೆನಾಡಿನಾದ್ಯಂತ ನಿರ್ಗತಿಕರಾದವರನ್ನು ಗುರುತಿಸಿ ವರ್ಷಂಪ್ರತಿ ಕೊಡುತ್ತಾ ಬರುತ್ತಿರುವ ರಮಝಾನ್ ಕಿಟ್ ವಿತರಣೆ ಈ ವರ್ಷವೂ ವಿತರಿಸಲಾಯಿತು.

ಎಂದಿನಂತೆ ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ, ದಾವಣಗೆರೆ ಜಿಲ್ಲೆಯ ಭಾಗದಲ್ಲೂ, ಅಂತರರಾಷ್ಟ್ರೀಯ ಮಟ್ಟದ ನೇಪಾಳಕ್ಕೆ ಕೂಡಾ ವಿತರಣೆಯನ್ನು ವಿಸ್ತರಿಸಿದ್ದು, ಸಮಿತಿಯ ವೈಶಿಷ್ಟ್ಯ ಮತ್ತು ವಿಶಾಲ ಮನೋಭಾವನೆಯಾಗಿತ್ತು.

ಪವಿತ್ರ ತಿಂಗಳಾದ ರಮಝಾನ್ ನಲ್ಲಿ ಯಾರೊಬ್ಬರೂ ಆಹಾರವಿಲ್ಲದೇ ಪರದಾಡುವ ಅವಸ್ಥೆಯಲ್ಲಿರಬಾರದೆಂಬ ನಿಲುವಿನಿಂದ ಈ ಕಾರ್ಯಕ್ರಮ ಹಮ್ಮಿಕೊಂಡು 2014 ರಿಂದ 2022ರ ವರ್ಷಗಳವರೆಗೆ ದೌತ್ಯವನ್ನು ಪೂರೈಸಲು ಸಾಧ್ಯವಾಯಿತೆಂದು  ಕೇಂದ್ರ ಸಮಿತಿಯ ಹಾಲಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್, ಜಯಪುರ (ಕ್ಲೌಡ್ ಸೆವನ್ ಕಂಪೆನಿ ಮಾಲಕರು) ಹೇಳಿರುತ್ತಾರೆ.

ರಮಝಾನ್ ಕಿಟ್ ತಯಾರಿ ಮತ್ತು ವಿತರಣಾ ವ್ಯವಸ್ಥೆ ಮಾಡಿದ ಕೇಂದ್ರೀಯ ಮತ್ತು ರಾಷ್ಟ್ರೀಯ ಸಮಿತಿ ತಂಡಕ್ಕೆ ಮತ್ತು ಇದಕ್ಕೆ ಸಹಾಯ ಮಾಡಿದ ದಾನಿಗಳಿಗೂ, ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಕ್ರಮ್ ಹಾಜಿ ಮೂಡಿಗೆರೆ ಇವರ ಸಾರಥ್ಯದಲ್ಲಿ ಮಲೆನಾಡಿನಾದ್ಯಂತ ಬಹಳ ನಿಗಾವಹಿಸಿ ಕಡು ಬಡವರಿಗೆ ಮಾತ್ರ ಈ ಸೌಲಭ್ಯಗಳನ್ನು ತಲುಪಿಸುವಲ್ಲಿ  ಬಹಳ ಶ್ರಮಪಟ್ಟು ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರವಹಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಯೂಸುಫ್ ಹಾಜಿ ಉಪ್ಪಳ್ಳಿ,  ಜಿಲ್ಲಾಧ್ಯಕ್ಷರಾದ ವಹೀದ್ ಮಾಗುಂಡಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಕಾಫಿ  ಬೋರ್ಡ್  ಇವರ ನೇತೃತ್ವದಲ್ಲಿ ಚಿಕ್ಕಮಗಳೂರು ಝೋನಿನಲ್ಲಿ  ಅಧ್ಯಕ್ಷರಾದ ಅಕ್ಬರ್ ಸಿಲಿಕಾನ್, ಬಾಳೆಹೊನ್ನೂರು ಝೋನ್ ಅಧ್ಯಕ್ಷರಾದ  ಝಮೀರ್ ಮೂಸಬ್ಬ , ಮೂಡಿಗೆರೆ ಝೋನ್   ಅಧ್ಯಕ್ಷರಾದ  ಇಸಾಕ್ ಹಾಜಿ ಕಿಟ್ ವಿತರಣಾ ಕಾರ್ಯಕ್ರಮ ನೆರವೇರಿಸಿದರು.

ಟ್ರಸ್ಟಿಗಳಾದ  ನಿಯಾಝ್ ಅಹ್ಮದ್ ಹೆರಿಟೇಜ್, ನಾಸಿರ್ ಇಂಫಾಲ್, ರಾಷ್ಟ್ರೀಯ ಸಲಹೆಗಾರ ಬಿ.ಎಸ್ ಮಹಮ್ಮದ್ ಉಪಸ್ಥಿತರಿದ್ದರು.

ಹಾಸನ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಹಸೈನಾರ್ ಆನೆಮಹಲ್ ಮತ್ತು ಕಾರ್ಯದರ್ಶಿ ಸಲೀಂ ಹಾಸನ, ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೌಶಾದ್ ಜನ್ನತ್,  ಜಿಲ್ಲಾಧ್ಯಕ್ಷ ಅಶ್ರಫ್ ಗೋಣಿಕೊಪ್ಪ ಮತ್ತು ಜಿಲ್ಲಾ ಕಾರ್ಯದರ್ಶಿ ಜಲೀಲ್ ಅಮ್ಮತ್ತಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾದ ಮಯ್ಯದ್ದಿ ರಂಜದಕಟ್ಟೆ, ಅಬ್ದುಲ್ ರಹ್ಮಾನ್ ಮಾಳೂರು, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಮಾಸ್ತಿಕಟ್ಟೆರವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.‌

ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಕಡೆಗಳಲ್ಲಿ ವಿಸ್ತರಿಸಿ ಸಂಸ್ಥೆಯ  ಪ್ರಮುಖ ಉದ್ದೇಶವಾದ ಶಿಕ್ಷಣ ಮತ್ತು ತುರ್ತು ವೈದ್ಯಕೀಯ ಸಹಾಯ ಮಾಡಲು ಮುಂದಾಗುವುದಾಗಿ ಕೇಂದ್ರ ಸಮಿತಿಯ  ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ ತಿಳಿಸಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಇರ್ಷಾದ್ ಚಕ್ಕಮಕ್ಕಿ, ಗೌರವಾಧ್ಯಕ್ಷರಾದ ಶರೀಫ್ ಸಾಂಕೊನ್, ಕೋಶಾಧಿಕಾರಿ ಬಶೀರ್ ಬಾಳ್ಳುಪೇಟೆ, ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಸಿದ್ದಿಕ್ ಬಾಳೆಹೊನ್ನೂರು, ಅಂತರರಾಷ್ಟ್ರೀಯ ಸಂಯೋಜಕರಾದ ಇಕ್ಬಾಲ್ ಗಬಗಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News