ಕಾರ್ಕಳ : ಪಿಡಿಒ ನೇಮಿಸುವಂತೆ ಧರಣಿ

Update: 2022-04-21 11:36 GMT

ಕಾರ್ಕಳ : ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕವಾಗದೆ ಅಭಿವೃದ್ಧಿ ಕುಂಠಿತವಾಗಿದೆ ಇಂಧನ ಸಚಿವರ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಲ್ಲದೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ‌ಅದಕ್ಕಾಗಿ ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿ ಈದು ಗ್ರಾಮ ಪಂಚಾಯತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಡಳಿತವಿದ್ದು ಕಳೆದ 5 ತಿಂಗಳಿಂದ ಪಿಡಿಒ ಆಗಲಿ ಸೆಕ್ರೆಟರಿಯಾಗಲಿ ಇರುವುದಿಲ್ಲ ಇದರಿಂದಾಗಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಫೆಬ್ರವರಿಯಲ್ಲಿ ನಡೆಯುವ ಗ್ರಾಮ ಸಭೆ ನಡೆಯಲಿಲ್ಲ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಪದೇಪದೇ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬಂದು ಬಂದು ಬೇಸರದಿಂದ ವಾಪಸಾಗುವ ದ್ರಶ್ಯ ಸರ್ವೇ ಸಾಮಾನ್ಯವಾಗಿದೆ. ತಾಲೂಕು ಪಂಚಾಯತ್ ಇಒ ಅವರಲ್ಲಿ ಹಲವಾರು ಬಾರಿ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ವತಃ ಇಂಧನ ಸಚಿವರೇ ಶಾಸಕರಾಗಿದ್ದರೂ ಕೂಡ ಇತ್ತ ಗಮನ ಹರಿಸುತ್ತಿಲ್ಲ. ಸಚಿವರ ಕ್ಷೇತ್ರದಲ್ಲಿ ಇಂತಹ ದುರವ್ಯಸ್ಥೆ ನಾಚೀಗೆಕೇಡು ಕಾಂಗ್ರೆಸ್ ಆಡಳಿತ ಇದ್ದ ಮಾತ್ರಕ್ಕೆ ಇಂತಹ ಇಂತಹ ತೊಂದರೆಗಳನ್ನು ನೀಡುವುದು ಶೋಭೆ ತರುವಂತಹದಲ್ಲ. ಮುಂದಿನ15 ದಿನಗಳ ಒಳಗೆ ಪಿಡಿಒ ನೇಮಕವಾಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಗ್ರಾಮ ಪಂಚಾಯತಗೆ ಸಂಬಂಧಪಟ್ಟ ಎಲ್ಲ ಕಚೇರಿಗಳಿಗೆ ಮುತ್ತಿಗೆ ಹಾಕುವುದರ ಜೊತೆಗೆ ಪಂಚಾಯತ್ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ, ಸದಸ್ಯರಾದ ಸದಾನಂದ ಪೂಜಾರಿ, ಸುರೇಶ್ ಆಚಾರಿ, ಜಯ ಸುವರ್ಣ, ಪ್ರಶಾಂತ್ ಆಚಾರ್ಯ, ಸವಿತಾ ಜೈನ್, ನಯನ ಲಕ್ಮಣ ಪೂಜಾರಿ, ಸುಜಾತ ಶೇಖರ್ ಕುಲಾಲ್, ವಿನಯ ಬಾಲಕೃಷ್ಣ ಕುಲಾಲ್, ರಮಣಿ ಕೊರಗಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News