ಕಾರ್ಕಳ ಶಿರ್ಡಿ ಸಾಯಿ ಪದವಿ ಕಾಲೇಜು ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ನಡೆಸುವ ಏಕೈಕ ಸಂಸ್ಥೆ : ಚಂದ್ರಹಾಸ ಸುವರ್ಣ

Update: 2022-04-21 16:35 GMT

ಕಾರ್ಕಳ: ಕಾರ್ಕಳ ಶಿರ್ಡಿ ಸಾಯಿ ಪದವಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆ ಮತ್ತು ಕರ್ನಾಟಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದುಕೊಂಡು, ವೃತ್ತಿಪರ ಪದವಿ ಶಿಕ್ಷಣ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಪೈಕಿ, ರಾಜ್ಯದಲ್ಲಿ ವೃತ್ತಿಪರ ಕೋರ್ಸನ್ನು ನಡೆಸುವ ಏಕೈಕ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಚಂದ್ರಹಾಸ ಸುವರ್ಣ ಹೇಳಿದ್ದಾರೆ.

ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ 100% ಉದ್ಯೋಗದ ಅವಕಾಶ ಒದಗಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಕೇವಲ 4ನೇ ಸೆಮಿಸ್ಟರ್‍ನಲ್ಲಿಯೇ ಉದ್ಯೋಗವನ್ನು ಪಡೆದಿದ್ದಾರೆ.

ಬಿಎಸ್ಸಿ ಇಂಟೀರಿಯರ್ ಡಿಸೈನ್, ಡೆಕೊರೇಶನ್ ಪದವಿಯಲ್ಲಿ ಸಂಚಲನ ಸೃಷ್ಟಿಸಿದ ಈ ಶಿಕ್ಷಣ ಸಂಸ್ಥೆ, ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸ್‍ನಲ್ಲೂ ಯಶಸ್ವಿ ಸಾಧನೆ ಮಾಡಿದೆ. ಪ್ರಸ್ತುತ ಅನೇಕ ವಿದ್ಯಾರ್ಥಿಗಳು ಏರ್ ಲೈನ್ಸ್ ನಲ್ಲಿ ಕರ್ತವ್ಯದಲ್ಲಿದಾರೆ. ನಮ್ಮ ಸಂಸ್ಥೆಯು ಇಂಡಿಯನ್ ಏವಿಯೇಷನ್ ಅಕಾಡೆಮಿ ಮಂಗಳೂರು ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಉದ್ಯೋಗವನ್ನು ಒಡಂಬಡಿಕೆಯ ಅನ್ವಯ ಇಂಡಿಯನ್ ಏವಿಯೇಷನ್ ಅಕಾಡೆಮಿ ಮಂಗಳೂರು ನೋಡಿಕೊಳ್ಳುತ್ತಿದೆ ಎಂದರು. ಕಳೆದ ವರ್ಷ ತೃತೀಯ ಹಾಗೂ ಪ್ರಥಮ ಶ್ರೇಯಾಂಕ ಬಿಎಸ್ಸಿ ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೊರೇಶನ್ ಕೋರ್ಸ್‍ನಲ್ಲಿ ನಮ್ಮ ಸಂಸ್ಥೆಗೆ ಲಭಿಸಿದ್ದು, ಪ್ರಥಮ ಬ್ಯಾಚ್‍ನಲ್ಲಿಯೇ ಇಂಟೀರಿಯರ್ ಡಿಸೈನ್ ಕೋರ್ಸ್‍ನಲ್ಲಿ ದ್ವಿತೀಯ ಶ್ರೇಯಾಂಕ‌ ವನ್ನು ನಾವು ಪಡೆದಿದ್ದೇವೆ ಎಂದರು.

ಶೈಕ್ಷಣಿಕ ಚಟುವಟಿಕೆಗೆ ಒತ್ತು

ಶೈಕ್ಷಣಿಕ ಚಟುವಟಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಉಚಿತ ವಾಹನದ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲದ ವ್ಯವಸ್ಥೆ, ಸ್ಟಡಿ ಟೂರ್ ಮತ್ತು ಇಂಡಸ್ಟ್ರಿಯಲ್ ಭೇಟಿ ಹಾಗೂ ಏರ್‍ಪೋರ್ಟ್ ಭೇಟಿ ಮಾಡಲಾಗುತ್ತಿದೆ. ವಿದೇಶ ಪ್ರವಾಸಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.  

ಶಿರ್ಡಿ ಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳು ಕಾರ್ಕಳ (ಸುವರ್ಣ ಚಾರಿಟೇಬಲ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆ)ದಲ್ಲಿ ಶಿರ್ಡಿ ಸಾಯಿ ಪದವಿ ಪೂರ್ವ ಕಾಲೇಜು, ಶಿರ್ಡಿ ಸಾಯಿ ಪದವಿ ಕಾಲೇಜು,  ಶಿರ್ಡಿ ಸಾಯಿ ಪದವಿ ಪೂರ್ವ ಕಾಲೇಜನ್ನೊಳಗೊಂಡಿದೆ ಎಂದರು. 

2021ನೇ ಶೈಕ್ಷಣಿಕ ವರ್ಷಕ್ಕೆ ಅನುಮತಿ ದೊರೆತಿದ್ದು, ಪ್ರಥಮ ವರ್ಷದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎರಡನೇ ವರ್ಷದ ಶೈಕ್ಷಣಿಕ ಚಟುವಟಿಕೆಯ ತಯಾರಿ ರಾಜ್ಯ ಹಾಗೂ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಪರಿಕಲ್ಪನೆ ಮತ್ತು ಮಾದರಿಯಲ್ಲಿ ತರಗತಿ ನಡೆಯಲಿದೆ. ಈ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾದಂತಹ ಶಿಕ್ಷಣ(ಭೋಧನ ಶುಲ್ಕ ಮಾತ್ರ)ದ ಜತೆಗೆ 80,000ರೂ. ಶುಲ್ಕ ಪಾವತಿಸಬೇಕಾದ ವೃತ್ತಿಪರ ಶಿಕ್ಷಣವನ್ನು ಉಚಿತವಾಗಿ ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಅವರ ಮುಂದಿನ ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕೆ ಇದು ಸಹಕಾರಿಯಾಗಿದ್ದು, ಕೌಶಲ್ಯಾಧಾರಿತ ಶಿಕ್ಷಣದ ಗುರಿಯನ್ನು ನಾವು ಹೊಂದಿದ್ದೇವೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ತಜ್ಞರಿಂದ ಉತ್ತಮ ಸಹಕಾರವಿದ್ದು, ವಿಶೇಷ ಹಾಗೂ ವಿಭಿನ್ನವಾದ ಭೋಧನ ಕ್ರಮ ಹೊಂದಲಾಗಿದೆ. ಆಡಿಯೋ-ವಿಡಿಯೋ ವಿಷುವಲ್ ರೂಮ್ ಮೂಲಕ ಸಂವಾದ-ಸಂವಹನ ತರಗತಿಗಳು ನಡೆಯುತ್ತಿದೆ. ಪಠ್ಯದೊಂದಿಗೆ  ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 

ಸಂಸ್ಥೆಯ ಅಧ್ಯಕ್ಷ ಅಭಿಷೇಕ್ ಸುವರ್ಣ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಆಶಿಶ್ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News