ಎ.22: ಮೂಳೂರು ಮರ್ಕಝ್‍ನಲ್ಲಿ ರಮಝಾನ್ ಕಾರ್ಯಕ್ರಮ, ಇಪ್ತಾರ್ ಕೂಟ

Update: 2022-04-21 16:56 GMT

ಉಡುಪಿ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‍ನಲ್ಲಿ ಎ. 22ರಂದು ರಮಝಾನ್‌ ಕಾರ್ಯಕ್ರಮ ಮತ್ತು ಸಾಮೂಹಿಕ ಇಪ್ತಾರ್ ಕೂಟ ನಡೆಯಲಿದೆ.

ಅಸರ್ ನಮಾಝ್ ಬಳಿಕ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಪ್ರಥಮಾವಾಗಿ ಕುಂಬೋಳ್ ಅಸ್ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯಾ ದ್ಸಿಕ್ರ್ ಮಜ್ಲಿಸ್ ನಡೆಯಲಿದ್ದು ಮೂಳೂರು ಮುದರ್ರಿಸ್ ಹಾಫಿಳ್ ಮುಹಮ್ಮದ್ ಅಶ್ರಫ್ ಸಖಾಫಿ ಕಕ್ಕಿಂಜೆ‌ ಭಾಷಣ ಮಾಡಲಿದ್ದಾರೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ. ಈ ರಾಷ್ಟ್ರೀಯ ಸಮಿತಿ ವತಿಯಿಂದ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಮತ್ತು ಕುಂಬೋಲ್ ಸಾದಾತ್‍ಗಳ ಸಾನಿಧ್ಯದಲ್ಲಿ ಸಾಮೂಹಿಕ ಇಪ್ತಾರ್ ಕೂಟ ನಡೆಯಲಿದ್ದು ಸಾದಾತುಗಳೂ ಉಲಮಾಗಳೂ, ಉಮರಾಗಳೂ, ಮೂಳೂರು ಮರ್ಕಝ್‍ನ ಆಡಳಿತ ಸಮಿತಿಯವರೂ,  ಡಿಕೆಎಸ್ಸಿ  ಪ್ರತಿನಿಧಿಗಳು ಹಾಗೂ ಇನ್ನಿತರ ಗಣ್ಯವ್ಯಕ್ತಿಗಳೂ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಯು.ಕೆ. ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News