ಮೇ 1ರಿಂದ ‘ಅತ್ರಂಗಿ’ ಬೇಸಿಗೆ ಶಿಬಿರ
Update: 2022-04-23 11:13 GMT
ಮಂಗಳೂರು : ಐದರಿಂದ ಹದಿನೈದು ವರ್ಷ ಪ್ರಾಯದೊಳಗಿನ ಮಕ್ಕಳಿಗಾಗಿ ಱಅತ್ರಂಗಿ ೨೦೨೨’ ಎನ್ನುವ ಬೇಸಿಗೆ ಶಿಬಿರವನ್ನು ಪಿಲಿಕುಳ ಗಾಲ್ಫ್ ಕ್ಲಬ್ನ ಮುಂಭಾಗದಲ್ಲಿರುವ ರಾಜೀವಿ ವಿಶ್ವಾಂಗಣದಲ್ಲಿ ಮೇ ೧ ಮತ್ತು ೨ರಂದು ಆಯೋಜಿಸಲಾಗಿದೆ ಎಂದು ಸಂಯೋಜಕಿ ವೃಂದಾ ಕೊನ್ನಾರ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಬಿರದಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಧ್ಯಾನ, ಚಿತ್ರಕಲೆ, ಕರಕುಶಲ ತರಬೇತಿ, ಸಂಗೀತ, ನೃತ್ಯ ಕ್ಲೇ ಮಾಡೆಲಿಂಗ್ ಹಾಗೂ ಆಟೋಟಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೋಟಿಂಗ್ ಹಾಗೂ ಪಿಲಿಕುಳ ಮೃಗಾಲಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಶುಲ್ಕ 399 ರೂ. ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊ.ಸಂ: ೯೯೮೦೨೩೮೦೭೬ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಿಧಿ ರಾವ್, ಶ್ರೀವತ್ಸ ಭಟ್, ಮೈತ್ರಿ ಉಪಾಧ್ಯ, ಪ್ರಶಾಂತ್ ರಾವ್ ಉಪಸ್ಥಿತರಿದ್ದರು.