ಮೇ 8 : ಕಥಾ ಸಮಯ, ಕಾವ್ಯ ಸಂಚಯ, ಕೃತಿಗಳ ಬಿಡುಗಡೆ

Update: 2022-05-04 12:05 GMT

ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ’ಅಭಿನಂದನಾ’ ಸಾಹಿತ್ಯ ಕಾರ್ಯಕ್ರಮವು ಮೇ 8ರಂದು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ವಸಂತ್ ಮಹಲ್ ಸಭಾಂಗಣದಲ್ಲಿ ನಡೆಯಲಿದೆ.

ಅಲ್ಲದೆ ಕಾರ್ಯಕ್ರಮದಲ್ಲಿ ಹಿರಿಯ ಕವಿ ಇರಾ ನೇಮು ಪೂಜಾರಿ ಅವರನ್ನು ಸನ್ಮಾನಿಸಲಾಗುವುದು. ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರು ಆರು ತಿಂಗಳಲ್ಲಿ ಬರೆದಿರುವ ಆಯ್ದ ಬರಹಗಳ ಸಂಕಲನ ’ಚುಸಾಪ ಸಮಗ್ರ ಸಾಹಿತ್ಯ ಸಂಪುಟ’ ವನ್ನು ಪತ್ರಕರ್ತ ಕವಿ ಎಡ್ವರ್ಡ್ ಲೋಬೋ ಬಿಡುಗಡೆಗೊಳಿಸುವರು. ಕವಿತೆಯ ಸಾರ್ಥಕತೆ ಕೃತಿಯನ್ನು ಕವಯತ್ರಿ ಆಕೃತಿ ಐಎಸ್ ಭಟ್ ಬಿಡುಗಡೆಗೊಳಿಸುವರು.

ಕಥೆಗಾರ್ತಿ, ಸಹ ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಕಥಾ ಸಮಯ ನಡೆಯಲಿದೆ.  ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್‌ನ ತಲಪಾಡಿ ಶಾಖೆಯ ವ್ಯವಸ್ಥಾಪಕಿ ವಾಣಿ ಲೋಕಯ್ಯ ಅಧ್ಯಕ್ಷತೆಯಲ್ಲಿ ’ಕಾವ್ಯ ಸಂಚಯ’ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News