ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2022-05-17 16:31 GMT

ಶಿರ್ವ : ವಿಪರೀತ ಶರಾಬು ಕುಡಿಯುವ ಚಟ ಹಾಗೂ ಮಾನಸಿಕ ಖಾಯಿಲೆ ಕಾರಣಕ್ಕಾಗಿ ಪತ್ನಿ ಬಿಟ್ಟು ಹೋಗಿರುವ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಳತ್ತೂರು ಗ್ರಾಮದ ಕನ್ನಡರಬೆಟ್ಟುವಿನ ಸುನೀಲ್ ದೇವಪ್ರಸಾದ ಸೋನ್ಸ್(೩೮) ಎಂಬವರು ಮೇ ೧೬ರಂದು ಬೆಳಗ್ಗೆ ಬಚ್ಚಲು ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ವೈಯಕ್ತಿಕ ಕಾರಣದಿಂದ ಮನನೊಂದ ಚಾಂತಾರು ಗ್ರಾಮದ ಅರಿಕ್ಲುಬೆಟ್ಟುವಿನ ಶೇಖರ ದೇವಾಡಿಗ(೪೮) ಎಂಬವರು ಕಂದಾವರ ಗ್ರಾಮದ ಸಾಂತಾವರ ಬಳಿ ಹಾಡಿಯಲ್ಲಿ ಮೇ ೧೬ರಂದು ರಾತ್ರಿ ವೇಳೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News