ಕಾಸರಗೋಡು | ಕೋವಿಯಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗಲಿ ಸಿಪಿಐ ಮುಖಂಡ ಮೃತ್ಯು

Update: 2022-06-15 08:02 GMT

ಕಾಸರಗೋಡು, ಜೂ.15: ಕೋವಿಯಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ಮಂಗಳವಾರ ನಡೆದಿರುವುದು ವರದಿಯಾಗಿದೆ.

ಸಿಪಿಐ ಸ್ಥಳೀಯ ಮುಖಂಡರಾದ ಕರಿಚ್ಚೇರಿಯ ಮಾಧವನ್(65) ಮೃತಪಟ್ಟವರು. ಹಲಸು ಕೊಯ್ಯಲೆಂದು ಹಿತ್ತಲಿಗೆ ತೆರಳಿದ್ದ ಮಾಧವನ್ ನೆಲದಲ್ಲಿಟ್ಟಿದ್ದ ಕೋವಿಯನ್ನು ಆಕಸ್ಮಿಕವಾಗಿ ತುಳಿದಾಗ ಸಿಡಿದ ಗುಂಡು ಅವರ ಕಾಲಿಗೆ ತಗಲಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅಲ್ಲೇ ಬಿದ್ದಿದ್ದ ಅವರನ್ನು ಮನೆಮಂದಿ ಗಮನಿಸುವಾಗ ತುಂಬಾ ಹೊತ್ತಾಗಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ  ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News