ಬೈಂದೂರು; ಕಾರು ಢಿಕ್ಕಿ, ಪಾದಚಾರಿ ಮೃತ್ಯು
Update: 2022-06-23 16:11 GMT
ಬೈಂದೂರು : ವೇಗವಾಗಿ ಬಂದ ಕಾರೊಂದು ರಸ್ತೆಯ ತೀರಾ ಎಡಭಾಗಕ್ಕೆ ಬಂದು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ತಾಲೂಕಿನ ಯಡ್ತರೆ ಗ್ರಾಮದ ನಾಕಟ್ಟೆ ಎಂಬಲ್ಲಿ ಬುಧವಾರ ರಾತ್ರಿ ೯:೪೫ಕ್ಕೆ ನಡೆದಿದೆ.
ಮೃತರನ್ನು ಯಡ್ತರೆಯ ರಾಜು ಗಾಣಿಗ (39) ಎಂದು ಗುರುತಿಸಲಾಗಿದೆ.
ಅವರು ರಾತ್ರಿ ರಸ್ತೆ ದಾಟಲು ರಾಷ್ಟ್ರೀಯ ಹೆದ್ದಾರಿ ೬೬ರ ಪಶ್ಚಿಮ ಭಾಗದ ಸರ್ವಿಸ್ ರಸ್ತೆಯ ಡಿವೈಡರ್ ಬಳಿ ನಿಂತಿದ್ದು, ಆಗ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದದು ಪರಾರಿಯಾಗಿತ್ತು. ತಲೆ ಮತ್ತು ಕಾಲಿಗೆ ತೀವ್ರವಾಗಿ ಗಾಯಗೊಂಡ ರಾಜು ಗಾಣಿಗರನ್ನು ಕೂಡಲೇ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.