ಸಂಸತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್‌

ಕೇರಳದ ವಯನಾಡಿನಲ್ಲಿ ಉಂಟಾದ ಭಾರೀ ಭೂಕುಸಿತಗಳಿಗೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಸಂಸದ ಕೆ ಸಿ ವೇಣುಗೋಪಾಲ್‌ ಅವರು ನಿಲುವಳಿ ಸೂಚನೆ ಮಂಡಿಸಿದರು ಹಾಗೂ ತಕ್ಷಣ ನಾಪತ್ತೆಯಾದವರಿಗೆ ಶೋಧ ಮತ್ತು ರಕ್ಷಣಾ ಕ್ರಮಗಳಿಗಾಗಿ ಆಗ್ರಹಿಸಿದರು.

ಭಾರೀ ಮಳೆಯಿಂದಾಗಿ ವಯನಾಡಿನಲ್ಲಿ ಉಂಟಾದ ಭೂಕುಸಿತಗಳ ಕುರಿತು ಚರ್ಚಿಸಲು ನಿಯಮ 267 ಅನ್ವಯ ಸಸ್ಪೆನ್ಶನ್‌ ಆಫ್‌ ಬಿಸಿನೆಸ್‌ ನೋಟಿಸ್‌ ಅನ್ನು ಐಯುಎಂಎಲ್‌ ಸಂಸದ ಪಿ ವಿ ಅಬ್ದುಲ್‌ ವಹಾಬ್‌ ನೀಡಿದರು.

Update: 2024-07-30 06:52 GMT

Linked news