ಹಾಸನೂರು: ನೀರಿನ ತೊಟ್ಟಿಗೆ ಬಿದ್ದು ಏಳು ವರ್ಷದ ಬಾಲಕಿ ಮೃತ್ಯು

Update: 2024-08-18 07:29 GMT

ಚಾಮರಾಜನಗರ: ಮನೆಯ ನೀರಿನ ತೊಟ್ಟಿಯಲ್ಲಿ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಪಂಚಾಯತ್ ವ್ಯಾಪ್ತಿಯ ಮಾವಳ್ಳಂ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಬಳಿಯ ಹಾಸನೂರು ಪಂಚಾಯತ್ ನ ಕೆಳಮ್ಮವಳ್ಳಂ ಗ್ರಾಮದಲ್ಲಿ ಮಹಾದೇವನ್, ಕನಕಾ ದಂಪತಿಯ ಪುತ್ರಿ ಅಕಲ್ಯಾ(7) ಮೃತಪಟ್ಟ ಬಾಲಕಿ.

ಕೂಲಿ ಕೆಲಸಗಾರರಾಗಿರುವ ಮಹಾದೇವನ್ ಕನಕ ದಂಪತಿ ಶನಿವಾರ ಸಂಜೆ ಸಮೀಪದ ತೋಟಕ್ಕೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಕಲ್ಯಾ ನೆರೆಹೊರೆಯ ಮಕ್ಕಳೊಂದಿಗೆ ಮನೆಯಲ್ಲಿ ಕಣ್ಣಾಮುಚ್ಚಿ ಆಟವಾಡುತ್ತಿದ್ದಳು. ಆಗ ಅನಿರೀಕ್ಷಿತವಾಗಿ ಮನೆಯ ಆರಡಿ ಆಳದ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಾಸನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News