ಕಾಲು ಜಾರಿ ಹೊಳೆಗೆ ಬಿದ್ದು ಕೃಷಿಕ ಮೃತ್ಯು

Update: 2023-07-03 15:26 GMT

ಕೋಟ, ಜು.೩: ಕಾಲು ಜಾರಿ ಹೊಳೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಜು.2ರಂದು ಮಧ್ಯಾಹ್ನ ವೇಳೆ ಮಣೂರು ಗ್ರಾಮದ ಕಾಸನಗುಂದು ಎಂಬಲ್ಲಿ ನಡೆದಿದೆ.

ಮೃತರನ್ನು ಕಾಸನಗುಂದು ನಿವಾಸಿ ಮಹೇಶ್(43) ಎಂದು ಗುರುತಿಸ ಲಾಗಿದೆ.

ಇವರು ಗಾರೆ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿ ದಾಗ ಮಹೇಶ್ ಮೃತದೇಹವು ಕಾಸಗುಂದು ಹೊಳೆಯಲ್ಲಿ ಪತ್ತೆ ಯಾಗಿದೆ. ಇವರು ಗದ್ದೆ ಕೆಲಸ ಮುಗಿಸಿ ಹಾರೆ ಮತ್ತು ಕಾಲು ತೊಳೆಯುವಾಗ ಆಕಸ್ಮಿಕ ವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News