ಪೆಟ್ರೋಲ್ ಬಂಕ್‌ಗೆ ನುಗ್ಗಿ ಸೊತ್ತು ಕಳವು

Update: 2023-07-03 15:50 GMT

ಬ್ರಹ್ಮಾವರ, ಜು.೩: ಚೆರ್ಕಾಡಿ ಗ್ರಾಮದ ಕನ್ನಾರು ಗುಂಟಾರಿಕಲ್ಲಿನ ಪೇತ್ರಿ ಎಂಬಲ್ಲಿರುವ ಪೆಟ್ರೋಲ್ ಬಂಕ್‌ಗೆ ಜು.2ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಹೊಸೂರು ಮೇಲ್ಕರ್ಜೆಯ ಗಣೇಶ್ ಶೆಟ್ಟಿ ಎಂಬವರ ಶ್ರೇಯಸ್ ಫ್ಯೂಯಲ್ಸ್ ಪೆಟ್ರೋಲ್ ಬಂಕಿನ ಶಟರ್‌ನ ಬೀಗ ಒಡೆದು ಒಳನುಗ್ಗಿದ ಕಳ್ಳರು, ಸಿಸಿ ಕೆಮರಾದ ಡಿವಿಆರ್, ಚಿಲ್ಲರೆ ಹಣ ಮತ್ತು ನಾಣ್ಯ, ದೇವರ ಡಬ್ಬಿಯಲ್ಲಿರುವ ಕಾಣಿಕೆ ಹಣ, ಲ್ಯಾಪ್‌ಟಾಪ್ ಹಾಗೂ ಟ್ಯಾಂಕರಿನ ಕೀ ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 96500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News