ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2023-07-03 15:16 GMT

ಶಿರ್ವ: ವಿಪರೀತ ಮಳೆಯಿಂದಾಗಿ ಬಾವಿಯ ಮಣ್ಣು ಕುಸಿದು ನೀರು ತರಲು ಹೋದ ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜು.3 ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪಾದೂರು ಕುರಾಲ್ ನಿವಾಸಿ ವೆಂಕಟೇಶ್ ದೇವಾಡಿಗ ಎಂಬವರ ಮಗಳು ಗುಲಾಬಿ(43) ಎಂದು ಗುರುತಿಸಲಾಗಿದೆ.

ಇವರು ಬಾವಿಯಿಂದ ನೀರು ತರಲು ಹೋದ ವೇಳೆ ವಿಷರೀತ ಮಳೆಯಿಂದ ಬಾವಿಯ ಬಳಿಯ ಮಣ್ಣು ಕುಸಿಯಿತ್ತೆನ್ನಲಾಗಿದೆ. ಇದರ ಪರಿಣಾಮ ಆಕೆ ಮಣ್ಣು ಸಮೇತ ಬಾವಿಗೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News