ಸುಳ್ಯದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ

Update: 2023-07-14 14:14 GMT

ಸುಳ್ಯ: ದೇವಚಳ್ಳ ಗ್ರಾಮದ ತಳೂರಿನ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ದೇವಚಳ್ಳ ಗ್ರಾಮದ ತಳೂರಿನ ಬಾಲಕೃಷ್ಣ ಎಂಬವರ ಪುತ್ರ ಹೇಮನಾಥ (45) ಮೃತ ವ್ಯಕ್ತಿ.

ಹೇಮನಾಥ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಕುಟುಂಬ ಸಮೇತ ನೆಲೆಸಿದ್ದರು. ಅಲ್ಲಿಯೇ ಸೆಕ್ಯುರಿಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ಐದಾರು ತಿಂಗಳಿನಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಮನೆಯಲ್ಲಿದ್ದ ಹೇಮನಾಥರವರು ಗುರುವಾರ ಸಂಜೆ ಪೇಟೆಗೆ ಹೋಗಿ ಬಂದವರು ರೂಮಿಗೆ ಹೋಗಿ ಬಾಗಿಲು ಹಾಕಿ ಮಲಗಿದ್ದರು. ಪತ್ನಿ ಬಂದು ಕರೆದಾಗ ಪ್ರತಿಕ್ರಿಯಿಸಲಿಲ್ಲ. ಒಳಗಿನಿಂದ ಚಿಲಕ ಹಾಕಿದ್ದ ಕಾರಣ, ಪಕ್ಕದ ಕಟ್ಟಡದ ಮೂಲಕ ನೋಡಿದಾಗ ಹೇಮನಾಥರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ, ಮೂರು ಮಕ್ಕಳು, ಸಹೋದರರನ್ನು ಅಗಲಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News