ಗಾಂಜಾ ಸೇವನೆ ಆರೋಪ: ಯುವಕ ಸೆರೆ

Update: 2023-07-13 15:05 GMT

ಮಂಗಳೂರು, ಜು.13: ನಗರದ ಲಾಲ್‌ಭಾಗ್ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆ ತಣ್ಣೀರುಬಾವಿ ನಾಯರ್ ಕುದ್ರು ನಿವಾಸಿ ಸುನೀಲ್ ರಿನ್ಸನ್ ಡ್ಯಾನ್ಸಿ ಡಿಸೋಜಾ (29) ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಜು.13ರಂದು ಮಧ್ಯಾಹ್ನ 2:15ಕ್ಕೆ ಅಮಲಿನಲ್ಲಿದ್ದಂತೆ ಕಂಡು ಬಂದ ಯುವಕನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾ ಯಿತು. ಸುನೀಲ್‌ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿಸಿರುವ ಪೊಲೀಸರು ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News