ಕುಂದಾಪುರ: ಅಂಚೆ ಸಹಾಯಕಿಯಿಂದ ಇಲಾಖೆಗೆ ಮೋಸ; ಪ್ರಕರಣ ದಾಖಲು

Update: 2023-07-03 15:58 GMT

ಕುಂದಾಪುರ, ಜು.3: ಅಂಚೆ ಸಹಾಯಕರೊಬ್ಬರು ಸಾರ್ವಜನಿಕರು ಖಾತೆಗೆ ಜಮಾ ಮಾಡಿದ ಹಣವನ್ನು ಇಲಾಖಾ ಲೆಕ್ಕಕ್ಕೆ ಜಮಾ ಮಾಡದೇ ಮೋಸ ಮಾಡಿರುವ ಬಗ್ಗೆ ಕುಂದಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಚೆ ಸಹಾಯಕಿ ಕಲಾವತಿ ಠೇವಣಿದಾರರ ಒಟ್ಟು 1,70,000 ರೂ. ಹಣವನ್ನು ಇಲಾಖಾ ಲೆಕ್ಕಕ್ಕೆ ಜಮಾ ಮಾಡದೇ ಸ್ವಂತ ಉಪಯೋಗಕ್ಕೆ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿದ್ದರು.

ಈ ಬಗ್ಗೆ 2021ರ ಸೆ.16ರಿಂದ ಇಲಾಖೆಯಿಂದ ಅಮಾನತ್ತಿನಲ್ಲಿಡಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News