ಗೃಹ ಸಚಿವ ಡಾ. ಜಿ. ಪರಮೇಶ್ವರ್ ಜ್ಞಾನಮುಖಿ : ಶ್ರೀ ಚಂದ್ರಶೇಖರ ಸ್ವಾಮೀಜಿ

Update: 2023-07-09 12:05 GMT

ಮಂಗಳೂರು: ಸದಾ ಸೃಜನಶೀಲರಾಗಿರುವವರಿಗೆ ಬೌದ್ಧಿಕ ಚಿಂತನೆಯೂ ನಿರಂತರವಾಗಿರುತ್ತದೆ. ಹಾಗಾಗಿ ಅವರಿಗೆ ನಿತ್ಯ ನೂತನ ಅವಕಾಶಗಳು ದೊರೆಯುತ್ತಾ, ನವಚೇತನಕ್ಕೆ ನಾಂದಿಯಾಗುತ್ತದೆ ಎಂದು ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ನಗರದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ದಂಪತಿಗೆ ವಿಶೇಷವಾಗಿ ಸನ್ಮಾನಿಸಿ, ಗೌರವಿಸಿದರು.

ಡಾ. ಜಿ ಪರಮೇಶ್ವರ್ ಅವರು ಸಾಧಕ ಶಕ್ತಿವಂತರಾಗಿದ್ದು, ಅವರು ಬದುಕಿನುದ್ದಕ್ಕೂ ಅನುಸರಿಸಿದ ಹೆಜ್ಜೆಗಳು ಅನುಕರಣೀಯವಾಗಿ ಅವರನ್ನು ಮತ್ತಷ್ಟು ಜ್ಞಾನಮುಖಿಯನ್ನಾಗಿಸಿದೆ. ಸ್ವಸ್ಥ ಸಮಾಜ, ಶಿಕ್ಷಣದರ್ಶಿ, ರಾಜಕೀಯ ಪಕ್ಷ ನಿಷ್ಠೆಯ ಸೇವೆಗಳೊಂದಿಗೆ ನಿರಂತರ ತುಡಿತಗಳಿರುವ ಡಾ. ಜಿ ಪರಮೇಶ್ವರ್ ಅವರಿಗೆ ಸೇವಾ ಅವಕಾಶಗಳ ಇನ್ನಷ್ಟು ಮಜಲುಗಳು ಸೇರಿಕೊಳ್ಳಲಿ ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಹಾರೈಸಿದರು.

ಸಮಾರಂಭದಲ್ಲಿ ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಘವ್ ಸೂರ್ಯ, ರೋಶಿನಿ ಸಿ ಭಟ್, ರಾಹುಲ್ ಸಿ ಭಟ್, ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ, ಭದ್ರತಾಧಿಕಾರಿ ಪ್ರದೀಪ್ ಗೌಡ, ರಾಜು ಎಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News