ಕೊಣಾಜೆ: ಮಳೆಗೆ ಗುಡ್ಡ ಕುಸಿತ, ಹಲವು ಮನೆಗಳಿಗೆ ಹಾನಿ

Update: 2023-07-04 14:08 GMT

ಕೊಣಾಜೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಕೊಣಾಜೆ, ಮಂಜನಾಡಿ, ಬೋಳಿಯಾರ್ , ಬೆಳ್ಮ ಗ್ರಾಮದ ಹಲವೆಡೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಬೋಳಿಯಾರು ಗ್ರಾಮದ‌ ಮರ್ಕಮೆ ಎಂಬಲ್ಲಿ ಧಾರಾಕಾರ ಮಳೆಗೆ ಚಂದ್ರಾವತಿ ಎಂಬವರ‌ ಮನೆಗೆ ಹಾನಿಯಾಗಿದೆ. ಮಂಜನಾಡಿ ಗ್ರಾಮದ ನಾಟೆಕಲ್ ಸಮೀಪದ ಜೊಹರಾ ಎಂಬವರ ಮನೆಗೆ ಸಮೀಪದ ಗುಡ್ಡದ ಮಣ್ಣು ಕುಸಿದು ಅಪಾರ ಹಾನಿಯಾಗಿದ್ದು ಇನ್ನಷ್ಟು ಮಣ್ಣು ಕುಸಿಯುವ ಅಪಾಯ ಎದುರಾಗಿದೆ. ಪಾವೂರು ಗ್ರಾಮದ ಪೋಡಾರ್ ಸೈಟ್ ಎಂಬಲ್ಲಿ ಭಾರೀ ಮಳೆಗೆ ಗುಡ್ಡದ ಮಣ್ಣು ಕುಸಿತಗೊಂಡಿದೆ. ಬೆಳ್ಮ ಗ್ರಾಮದ ದೇರಳಕಟ್ಟೆ ಬಳಿ ಇಸ್ಮಾಯಿಲ್ ಎಂಬವರ ಮನೆಗೆ ಗುಡ್ಡದ ಮಣ್ಣು‌ ಕುಸಿದು ಹಾನಿಯಾಗಿದೆ. ಬೆಳ್ಮ‌ ಗ್ರಾಮದ ಬರಿಕೆ ಎಂಬಲ್ಲಿ ದೈವಸ್ಥಾನಕ್ಕೆ ಮಣ್ಣು ಕುಸಿದು ಹಾನಿಯಾಗಿದೆ. ಅಂಬ್ಲಮೊಗರು ಗ್ರಾಮದ ಸಣ್ಣ ಮದಕ ಎಂಬಲ್ಲಿಯೂ ದರೆ‌ ಕುಸಿದು ಮನೆಯ ತಡೆಗೋಡೆ ಕುಸಿದು ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News