ಮಂಗಳೂರು: ಮನಪಾ ಆಯುಕ್ತರ ನೇಮಕ

Update: 2023-06-26 17:10 GMT

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಹಾಸನ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆನಂದ ಸಿ.ಎಲ್. (ಕೆ.ಎ.ಎಸ್) ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಸೋಮವಾರ ಆದೇಶಿಸಿದೆ.

ಪಾಲಿಕೆಯ ನೂತನ ಆಯುಕ್ತರಾಗಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನ್ಸೂರ್ ಅಲಿ ಅವರನ್ನು ಜೂ.೧೯ರಂದು ಸರಕಾರ ನೇಮಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಈ ಆದೇಶದಲ್ಲಿ ಮಾರ್ಪಾಡು ಮಾಡಿ ಅವರನ್ನು ಮುಡಾ ಆಯುಕ್ತರಾಗಿ ವರ್ಗಾಯಿಸಲಾಗಿತ್ತು.

ಪಾಲಿಕೆಯ ನಿಕಟಪೂರ್ವ ಆಯುಕ್ತ ಚನ್ನಬಸಪ್ಪ ಕೆ. ಅವರನ್ನು ರಾಜ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಯನ್ನಾಗಿ ವರ್ಗಾವಣೆಗೊಳಿಸಿರುವ ಕಾರಣದಿಂದ ಆಯುಕ್ತ ಹುದ್ದೆಗೆ ಇದೀಗ ಆನಂದ ಸಿ.ಎಲ್ ಅವರನ್ನು ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News